ಕರ್ನಾಟಕ ಭೂ ಸುಧಾರಣೆ ಕಾಯ್ದೆಯ ಉದ್ದೇಶಿತ ತಿದ್ದುಪಡಿ ವ್ಯಾಪ್ತಿಯಿಂದ ಅಚ್ಚುಕಟ್ಟು ಪ್ರದೇಶದ ನೀರಾವರಿ ಭೂಮಿಯನ್ನು ಹೊರಗಿಡುವುದಾಗಿ ಕಾನೂನು ಮತ್ತು ಸಣ್ಣ ನೀರಾವರಿ ಸಚಿವರು ತಿಳಿಸಿದ್ದಾರೆ (ಪ್ರ.ವಾ., ಜುಲೈ 3). ಆದರೆ ನಮ್ಮ ಜನರಿಗೆ ಎಣ್ಣೆಕಾಳು, ಬೇಳೆಕಾಳು, ಭತ್ತ ಹೊರತುಪಡಿಸಿ ಉಳಿದ ಆಹಾರಧಾನ್ಯಗಳನ್ನು ಪೂರೈಸುತ್ತಿರುವುದು ಖುಷ್ಕಿ ಭೂಮಿ. ರೈತರಿಗೆ ಬಹುಶಃ ಅದು ಲಾಭದಾಯಕವಲ್ಲ. ಆದರೆ ಈ ಭೂಮಿ ನಮ್ಮ ಜನರಿಗೆ ಇಂತಹ ಉತ್ಪನ್ನಗಳನ್ನು ಒದಗಿಸುತ್ತಾ ಉಪಯುಕ್ತವಾಗಿದೆ.