ಇತ್ತೀಚಿನ ವರ್ಷಗಳಲ್ಲಿ ಸರಗಳ್ಳರು, ಪೋಕರಿಗಳು ಹಾಗೂ ಸಮಾಜಘಾತುಕರು ಅತಿವೇಗದ ಬೈಕುಗಳಲ್ಲಿ ದುಷ್ಕೃತ್ಯ ಎಸಗಿ ಶರವೇಗದಲ್ಲಿ ಪರಾರಿಯಾಗುತ್ತಿರುವುದು ಕಣ್ಣ ಮುಂದೆಯೇ ಇದೆ. ಇಂತಹವರನ್ನು ನಿಧಾನಗತಿಯ ಸೈಕಲ್ ಮೇಲೇರಿ ಹಿಂಬಾಲಿಸಿ, ಹಿಡಿದು ಹೆಡೆಮುರಿ ಕಟ್ಟಲು ಸಾಧ್ಯವೇ? ಈಗ ಲಭ್ಯವಿರುವ ಯಂತ್ರಜ್ಞಾನವನ್ನು ಬಳಸಿಕೊಂಡು ಇಲಾಖೆ ಯಶಸ್ಸು ಸಾಧಿಸುತ್ತಿರುವ ಈ ದಿನಗಳಲ್ಲಿ, ಈ ವ್ಯವಸ್ಥೆಯು ಹಿಂದಕ್ಕೆ ಹೆಜ್ಜೆ ಹಾಕಿದಂತೆ ಅನ್ನಿಸುತ್ತದೆ.