ಹಿಂದಿನ ಮೈತ್ರಿ ಸರ್ಕಾರ ಅಧಿಕಾರ ಕಳೆದುಕೊಳ್ಳುವ ಅಪಾಯದ ಅಂಚಿನಲ್ಲಿ ಇದ್ದ ಸಂದರ್ಭವನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ, ಸರ್ಕಾರವನ್ನು ಉಳಿಸಿಕೊಳ್ಳುವ ಅನಿವಾರ್ಯದಿಂದ ಕದ್ದಾಲಿಕೆ ನಡೆದಿರಬಹುದೆಂಬ ಅನುಮಾನ ಜನಸಾಮಾನ್ಯರಲ್ಲಿ ಮೂಡುವುದರಲ್ಲಿ ಆಶ್ಚರ್ಯವಿಲ್ಲ. ನೂರಾರುಜನರ ಫೋನ್ಗಳು ಕದ್ದಾಲಿಕೆಯಾಗಿದ್ದವು ಎಂಬುದನ್ನು ಗಮನಿಸಿದಾಗ, ಸಹಜವಾಗಿಯೇ ಮೂಡುವ ಪ್ರಶ್ನೆಯೆಂದರೆ, ಫೋನ್ ಕದ್ದಾಲಿಕೆಗೆ ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆದ ನಂತರ, ಆ ಪಟ್ಟಿಗೆ ಅನಧಿಕೃತವಾಗಿ ಇತರರ ಹೆಸರುಗಳನ್ನೂ ಸೇರಿಸಲಾಗುತ್ತಿತ್ತೇ ಎಂಬುದು. ಅಲ್ಲದೆ, ಮುಖ್ಯಮಂತ್ರಿಯವರ ನೇರ ಅಧೀನದಲ್ಲಿರುವ ಗುಪ್ತಚರ ವಿಭಾಗದ ಗಮನಕ್ಕೇ ಇಂತಹ ಅತಿ ಸೂಕ್ಷ್ಮ ವಿಚಾರ ಬಾರದಿರುವುದು. ಹಾಗಾಗಿದ್ದರೆ, ಇದು ಆ ವಿಭಾಗದ ಅದಕ್ಷತೆ, ಕರ್ತವ್ಯಲೋಪ ಮತ್ತು ನಿರ್ಲಕ್ಷ್ಯವಾಗುವುದಿಲ್ಲವೇ? ಉದ್ದೇಶಪೂರ್ವಕವಾಗಿಯೇ ಅದುಕಂಡೂ ಕಾಣದಂತೆ ಇದ್ದುಬಿಟ್ಟಿತೇ? ಇವಕ್ಕೆಲ್ಲಾ ಸಿಬಿಐನ ನಿಷ್ಪಕ್ಷಪಾತ ತನಿಖೆಯೊಂದೇ ಉತ್ತರ ನೀಡಬಹುದೇನೊ!