ದೇಶದ ರಾಜಕೀಯ ಶುದ್ಧೀಕರಣಕ್ಕೆ ಹಾಗೂ ಸುಸ್ಥಿರ ಅಭಿವೃದ್ಧಿಗೆ ಶ್ರಮಿಸಲು ಪ್ರಜ್ಞಾವಂತ ನಾಗರಿಕರು, ಅದರಲ್ಲೂ ನಾಗರಿಕ ಸೇವಾ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ ದಕ್ಷ ಅಧಿಕಾರಿಗಳು ಸಕ್ರಿಯ ರಾಜಕೀಯಕ್ಕೆ ಬರುತ್ತಿರುವುದು ಕುತೂಹಲಕರ ಬೆಳವಣಿಗೆ. ಈ ಭ್ರಷ್ಟ ವ್ಯವಸ್ಥೆಯಲ್ಲಿ ಒಬ್ಬ ಅಧಿಕಾರಿಯಾಗಿ ಹೆಚ್ಚಿನ ಬದಲಾವಣೆ ತರಲು ಸಾಧ್ಯವಿಲ್ಲ, ಶಾಸನಸಭೆಗಳ ಮೂಲಕ ಅಂತಹ ಬದಲಾವಣೆ ತರಬಹುದು ಎಂದು ಭಾವಿಸಿ ರಾಜಕೀಯಕ್ಕೆ ಯಾರಾದರೂ ಬರುವುದಾದರೆ ಅಂಥವರನ್ನು ಸ್ವಾಗತಿಸೋಣ.