ರಾಜ್ಯದಲ್ಲಿ ಕೈ, ಕಮಲ, ತೆನೆಗಳ ಜಗ್ಗಾಟದಲ್ಲಿ ಶಾಸಕರ ನೈತಿಕತೆ ಪ್ರಶ್ನಾರ್ಹವಾಗಿದೆ. ವಿವಿಧ ಪಕ್ಷಗಳಲ್ಲಿ ಹಲವಾರು ಹಿರಿಯ ಶಾಸಕರಿದ್ದರೂ ಅವರು ಯಾರೂ ತಮ್ಮ ಪಕ್ಷಗಳ ತಪ್ಪು ಒಪ್ಪುಗಳನ್ನು ಪ್ರಶ್ನಿಸದೆ, ನಾಯಕರ ಮಾತಿಗೆ ಮೂಕ ಪ್ರಾಣಿಗಳಂತೆ ತಲೆ ಅಲ್ಲಾಡಿಸುತ್ತಿದ್ದಾರೆ. ಇಂತಹ ಪ್ರವೃತ್ತಿ, ಮತದಾರರಿಗೆ ಮಾಡುವ ದೊಡ್ಡ ಮೋಸ.