ಇಸ್ರೇಲ್ ಮಾದರಿಯ ತಂತ್ರಜ್ಞಾನದ ಕುರಿತು ಹಳ್ಳಿಗರಿಗೆ ಮನವರಿಕೆ ಆಗುವಂತಹ ಯೋಜನೆಗಳನ್ನು ಸರ್ಕಾರ ರೂಪಿಸ ಬೇಕು. ಅನಕ್ಷರಸ್ಥ ರೈತರಿಗೆ ಮಾರುಕಟ್ಟೆಯ ವ್ಯವಹಾರಗಳ ಕುರಿತು ಅರಿವು ಮೂಡಿಸುವ ಕಾರ್ಯಾಗಾರ ನಡೆಸಿ, ಬೆಳೆ ಸಮೀಕ್ಷೆ, ಸಾವಯವ ಕೃಷಿ ಮತ್ತು ತಂತ್ರಜ್ಞಾನ ಬಳಸಿ ಬೆಳೆದ ಬೆಳೆಯನ್ನು ಯಾವ ರೀತಿ ಮಾರುಕಟ್ಟೆಗೆ ತರಬೇಕೆಂಬ ವಿಷಯಗಳನ್ನು ತಿಳಿಸಬೇಕು. ಯಾಕೆಂದರೆ, ‘ಒಕ್ಕಲಿಗ ಒಕ್ಕಿದರೆ ನಕ್ಕು ನಲಿಯುವುದು ಜಗವೆಲ್ಲ, ಒಕ್ಕಲಿಗ ಒಕ್ಕದಿದ್ದರೆ ಬಿಕ್ಕುವುದು ಜಗವೆಲ್ಲ’ ಎಂಬ ಮಾತಂತೂ ಸತ್ಯ.