ಉತ್ತರ ಕರ್ನಾಟಕದ ಜನರು ಈ ಬಾರಿ ಭೀಕರ ಬರಗಾಲಕ್ಕೆ ತುತ್ತಾಗಿದ್ದಾರೆ. 2017– 18ನೇ ಸಾಲಿನಲ್ಲಿ ಅನೇಕ ರೈತರು ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ವಿಮಾ ಕ೦ತನ್ನು ಬ್ಯಾಂಕುಗಳಲ್ಲಿ ತುಂಬಿದ್ದು, ವಿಮೆಯ ಹಣವನ್ನು ಮರಳಿ ರೈತರ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡುವ ಕೆಲಸ ತುರ್ತಾಗಿ ಆಗಬೇಕಾಗಿದೆ.
ತೀವ್ರ ಬರಗಾಲದ ಈ ಸಮಯದಲ್ಲಿ ರೈತರಿಗೆ ವಿಮಾ ಹಣ ಸಿಕ್ಕರೆ ದೊಡ್ಡ ಆಸರೆಯಾಗುತ್ತದೆ. ಸರ್ಕಾರ, ಸಂಕಷ್ಟ ಕಾಲದಲ್ಲಿ ರೈತರಿಗೆ ಊರುಗೋಲಾಗಿ ನಿಲ್ಲಲಿದೆ ಹಾಗೂ ಅನ್ನದಾತನನ್ನು ರಕ್ಷಿಸಲು ಮುಂದಾಗುತ್ತದೆ ಎಂಬ ನಂಬಿಕೆಯನ್ನು ಉಳಿಸಿದಂತೆಯೂ ಆಗುತ್ತದೆ.