ವೆಂಕಯ್ಯ ನಾಯ್ಡು ಅವರು ಉಪರಾಷ್ಟ್ರಪತಿ ಅವಧಿ ಮುಗಿದ ಸಂದರ್ಭದಲ್ಲಿ ವಿದಾಯ ಭಾಷಣ ಮಾಡುವಾಗ, ಮಾತೃಭಾಷೆ ಅಥವಾ ರಾಜ್ಯ ಭಾಷೆಗಳ ಬಳಕೆಯ ಮಹತ್ವ ಕುರಿತು ಒತ್ತಿ ಹೇಳಿದರು. ಈ ಹಿಂದೆ ಕೂಡ ಅವರು ಹಲವಾರು ಸಂದರ್ಭಗಳಲ್ಲಿ ಈ ಬಗ್ಗೆ ಮಾತನಾಡಿದ್ದುಂಟು. ದೇಶಿ ಭಾಷೆಗಳ ಕುರಿತು ಅವರ ಕಳಕಳಿ ಪ್ರಶಂಸನೀಯ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ದಿಸೆಯಲ್ಲಿ ಕಾರ್ಯಪ್ರವೃತ್ತವಾಗಬೇಕಾಗಿದೆ.