‘ಸಿಎಎ: ಸುಳ್ಳುಗಳನ್ನು ನಿರ್ಲಕ್ಷಿಸಿ’ ಎಂಬ ರಾಜೀವ್ ಚಂದ್ರಶೇಖರ್ ಅವರ ಲೇಖನಕ್ಕೆ (ಪ್ರ.ವಾ., ಜ. 3), ಅದೇ ದಿನ ಅಭಿಮತ ಪುಟದಲ್ಲಿ ಪ್ರಕಟವಾದ ಗೋಪಾಲಕೃಷ್ಣ ಅಡಿಗರ ‘ಸುಭಾಷಿತ’ ಉತ್ತಮ ಉತ್ತರವಾಗಿದೆ.
‘ನಾವೆಲ್ಲರೂ ಒಂದೇ ಜಾತಿ, ಒಂದೇ ಮತ, ಒಂದೇ ಕುಲ; ನಾವು ಮನುಜರು’ ಎಂದಿರುವ ಕವಿಯ ದಿವ್ಯವಾಣಿಯೇ ನಮ್ಮ ಸಂವಿಧಾನದ ಅಂತಃಸತ್ವ. ಈ ಸತ್ವವನ್ನೇ ಸಿಎಎ ಬಲಿ ಕೊಟ್ಟಿದೆ ಎನ್ನುವ ಸಂಕಟ ಈ ದೇಶದ ಸಜ್ಜನರದ್ದಾಗಿದೆ.