<p>ಪಿ.ಯು. ಮಂಡಳಿ ಈ ಬಾರಿ ಅವಸರದಿಂದ ಫಲಿತಾಂಶ ಪ್ರಕಟಿಸಿರುವುದರಿಂದ ವಿಪರೀತ ಎಡವಟ್ಟುಗಳು ಕಂಡುಬಂದಿವೆ. ನನ್ನ ಪರಿಚಿತ ವಿದ್ಯಾರ್ಥಿನಿಗೆ ಕನ್ನಡ ವಿಷಯದಲ್ಲಿ ಕೇವಲ 10 ಅಂಕಗಳು ಬಂದಿದ್ದು, ಫೇಲ್ ಎಂದು ನಮೂದಾಗಿದೆ. ಆಕೆ ಉತ್ತರ ಪತ್ರಿಕೆಯ ಛಾಯಾಪ್ರತಿ ಪಡೆದು ನೋಡಿದಾಗ ಒಟ್ಟು ಅಂಕಗಳು 79 ಎಂದು ನಮೂದಾಗಿದೆ.</p>.<p><strong>ಇದನ್ನೂ ಓದಿ...<a href="https://www.prajavani.net/district/tumakuru/puc-result-633860.html?fbclid=IwAR05slggjrhcg4hDjaLKaWQGHjjCw59p8wYLhd37pQPzwnmL41pLW48o8x4" target="_blank">ಮೌಲ್ಯಮಾಪನ ಯಡವಟ್ಟು: 79 ಅಂಕ ಬಂದಿದ್ದರೂ 10 ಕೊಟ್ಟ ಮೌಲ್ಯಮಾಪಕ!</a></strong></p>.<p>ಇಂತಹ ಎಡವಟ್ಟುಗಳು ಸೂಕ್ಷ್ಮ ಮನಸ್ಸಿನ ವಿದ್ಯಾರ್ಥಿನಿಯರ ಮೇಲೆ ತೀವ್ರ ಪರಿಣಾಮ ಬೀರುತ್ತವೆ. ಅದಕ್ಕೆ ಯಾರು ಹೊಣೆ? ಮೌಲ್ಯಮಾಪಕರ ಬೇಜವಾಬ್ದಾರಿಯಿಂದ ಅನೇಕ ವೇಳೆ ಇಂತಹ ಎಡವಟ್ಟುಗಳು ಆಗುತ್ತವೆ. ಆದರೂ ವಿದ್ಯಾರ್ಥಿಗಳು ಹಣ ಕಟ್ಟಿ ಛಾಯಾಪ್ರತಿ ತರಿಸಿಕೊಳ್ಳಬೇಕಿದೆ.</p>.<p>ಒಂದು ವೇಳೆ ತಪ್ಪು ಮೌಲ್ಯಮಾಪಕರದ್ದು ಎಂದು ಸಾಬೀತಾದರೆ, ಅವರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು. ಜೊತೆಗೆ, ನೊಂದ ವಿದ್ಯಾರ್ಥಿಗಳು ಛಾಯಾ ಪ್ರತಿಗಾಗಿ ಸಲ್ಲಿಸಿದ್ದ ಶುಲ್ಕವನ್ನು ಹಿಂದಿರುಗಿಸುವ ವ್ಯವಸ್ಥೆ ಮಾಡಬೇಕು.</p>.<p><em><strong>–ಕೊಣನಕುರಿಕೆ ದಿವ್ಯ, ಪಾವಗಡ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಪಿ.ಯು. ಮಂಡಳಿ ಈ ಬಾರಿ ಅವಸರದಿಂದ ಫಲಿತಾಂಶ ಪ್ರಕಟಿಸಿರುವುದರಿಂದ ವಿಪರೀತ ಎಡವಟ್ಟುಗಳು ಕಂಡುಬಂದಿವೆ. ನನ್ನ ಪರಿಚಿತ ವಿದ್ಯಾರ್ಥಿನಿಗೆ ಕನ್ನಡ ವಿಷಯದಲ್ಲಿ ಕೇವಲ 10 ಅಂಕಗಳು ಬಂದಿದ್ದು, ಫೇಲ್ ಎಂದು ನಮೂದಾಗಿದೆ. ಆಕೆ ಉತ್ತರ ಪತ್ರಿಕೆಯ ಛಾಯಾಪ್ರತಿ ಪಡೆದು ನೋಡಿದಾಗ ಒಟ್ಟು ಅಂಕಗಳು 79 ಎಂದು ನಮೂದಾಗಿದೆ.</p>.<p><strong>ಇದನ್ನೂ ಓದಿ...<a href="https://www.prajavani.net/district/tumakuru/puc-result-633860.html?fbclid=IwAR05slggjrhcg4hDjaLKaWQGHjjCw59p8wYLhd37pQPzwnmL41pLW48o8x4" target="_blank">ಮೌಲ್ಯಮಾಪನ ಯಡವಟ್ಟು: 79 ಅಂಕ ಬಂದಿದ್ದರೂ 10 ಕೊಟ್ಟ ಮೌಲ್ಯಮಾಪಕ!</a></strong></p>.<p>ಇಂತಹ ಎಡವಟ್ಟುಗಳು ಸೂಕ್ಷ್ಮ ಮನಸ್ಸಿನ ವಿದ್ಯಾರ್ಥಿನಿಯರ ಮೇಲೆ ತೀವ್ರ ಪರಿಣಾಮ ಬೀರುತ್ತವೆ. ಅದಕ್ಕೆ ಯಾರು ಹೊಣೆ? ಮೌಲ್ಯಮಾಪಕರ ಬೇಜವಾಬ್ದಾರಿಯಿಂದ ಅನೇಕ ವೇಳೆ ಇಂತಹ ಎಡವಟ್ಟುಗಳು ಆಗುತ್ತವೆ. ಆದರೂ ವಿದ್ಯಾರ್ಥಿಗಳು ಹಣ ಕಟ್ಟಿ ಛಾಯಾಪ್ರತಿ ತರಿಸಿಕೊಳ್ಳಬೇಕಿದೆ.</p>.<p>ಒಂದು ವೇಳೆ ತಪ್ಪು ಮೌಲ್ಯಮಾಪಕರದ್ದು ಎಂದು ಸಾಬೀತಾದರೆ, ಅವರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು. ಜೊತೆಗೆ, ನೊಂದ ವಿದ್ಯಾರ್ಥಿಗಳು ಛಾಯಾ ಪ್ರತಿಗಾಗಿ ಸಲ್ಲಿಸಿದ್ದ ಶುಲ್ಕವನ್ನು ಹಿಂದಿರುಗಿಸುವ ವ್ಯವಸ್ಥೆ ಮಾಡಬೇಕು.</p>.<p><em><strong>–ಕೊಣನಕುರಿಕೆ ದಿವ್ಯ, ಪಾವಗಡ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>