ಕರ್ನಾಟಕದಲ್ಲಿ ಆಡಳಿತ ನಡೆಸುತ್ತಿರುವ, ಶಿಸ್ತು, ಸ್ವಚ್ಛ ಎಂದು ಹೇಳಿಕೊಳ್ಳುವ ಬಿಜೆಪಿ ನೇತೃತ್ವದ ಸರ್ಕಾರದ ವಿರುದ್ಧ ಶೇ 40ರ ಕಮಿಷನ್ ಆರೋಪ ಕೇಳಿಬಂದರೂ ಇಲ್ಲಿ ಇದು ಸಹಜ ಎಂಬಂತೆ ಅಧಿಕಾರಸ್ಥರು ನಡೆದುಕೊಂಡಿದ್ದಾರೆ. ಸಂಬಂಧಿಸಿದ ಸಚಿವರನ್ನು ಆಡಳಿತ ಪಕ್ಷದ ಮುಖಂಡರು ಸಮರ್ಥಿಸಿಕೊಳ್ಳಲು ಸಹ ಹಿಂದೇಟು ಹಾಕುವುದಿಲ್ಲ. ರಾಜಕಾರಣದ ಎಲ್ಲ ಮಗ್ಗುಲಿನಲ್ಲಿ ತುಂಬಿಕೊಂಡಿರುವ ಭ್ರಷ್ಟಾಚಾರಕ್ಕೆ ಹೀಗಾದರೆ ಕೊನೆ ಎಂದು? ಪಂಜಾಬ್ ಮಾದರಿ ಅನುಕರಣೀಯವಲ್ಲವೇ?
–ಗಣಪತಿ ಶಿರಳಗಿ,ಸಾಗರ