ಬ್ಯಾಂಕಿನ ಈ ನಿಲುವು, ಶಾಲಾ ವಿದ್ಯಾರ್ಥಿಯೊಬ್ಬ ಶಾಲೆಯಿಂದ ಮನೆಗೆ ಬಂದು ಪೋಷಕರಿಗೆ ‘ಇವತ್ತು ನಾನು ಏನೂ ತಪ್ಪು ಮಾಡಲಿಲ್ಲ. ಆದರೂ ಮೇಷ್ಟರು ನನಗೆ ಹೊಡೆದರು’ ಎಂದು ಹೇಳಿದಂತಿದೆ. ತಪ್ಪು ಮಾಡದಿದ್ದರೆ ಮೇಷ್ಟರು ಯಾಕೆ ಹೊಡೆಯುತ್ತಾರೆ? ಬ್ಯಾಂಕಿನ ಆಡಳಿತ ಮಂಡಳಿಯು ತಪ್ಪು ಹೆಜ್ಜೆ ಇಟ್ಟು ಅವ್ಯವಹಾರ ಮಾಡಿರುವುದರಿಂದಲೇ ಆರ್ಬಿಐ ಈ ನಿರ್ಬಂಧವನ್ನು ಹೇರಿರುವುದು. ಆದ್ದರಿಂದ, ಮಂಡಳಿಯು ತೊಂದರೆಗೆ ಒಳಗಾಗಿರುವ ಗ್ರಾಹಕರನ್ನು ಸಮಾಧಾನಪಡಿಸುವ ಸಲುವಾಗಿ, ತಪ್ಪು ತನ್ನದಲ್ಲವೆಂದು ಹೇಳುತ್ತಾ ಆರ್ಬಿಐ ಕಡೆ ಬೆರಳು ತೋರುತ್ತಿರುವುದು ಸರಿಯಲ್ಲ.