ಬೆಂಗಳೂರಿನ ಬಸವೇಶ್ವರ ವೃತ್ತದಲ್ಲಿನ ಅಶ್ವಾರೂಢ ಬಸವೇಶ್ವರರ ಮರುವಿನ್ಯಾಸಗೊಂಡ ಪ್ರತಿಮೆಯನ್ನು ಮುಖ್ಯಮಂತ್ರಿ ಇತ್ತೀಚೆಗೆ ಉದ್ಘಾಟಿಸಿದ್ದಾರೆ. ಈ ಸಂಬಂಧ ನಿಕಟಪೂರ್ವ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಅವರನ್ನು ಅಭಿನಂದಿಸಿ ವೀರಶೈವ ಲಿಂಗಾಯತ ಸಮಾಜವು ಪತ್ರಿಕೆಗಳಲ್ಲಿ ಜಾಹೀರಾತು ನೀಡಿದೆ (ಪ್ರ.ವಾ., ಆ. 28). ಇದನ್ನು ನೋಡಿದರೆ, ನಿಕಟಪೂರ್ವ ಮೇಯರ್ ತಮ್ಮ ಸೇವಾವಧಿಯಲ್ಲಿ ಹೆಚ್ಚಿನ ಅನುದಾನವನ್ನು ಪ್ರತಿಮೆಗಳ ಸ್ಥಾಪನೆಗೆ ನೀಡಿದರೇನೋ ಎಂಬ ಅನುಮಾನ ಮೂಡದಿರದು. ಬಸವಣ್ಣನವರನ್ನು ಮತ್ತು ಸಿದ್ಧಗಂಗಾ ಶ್ರೀಗಳನ್ನು ಒಂದು ವರ್ಗಕ್ಕೆ ಸೀಮಿತಗೊಳಿಸುವುದು ಸರಿಯಲ್ಲ ಎಂಬುದು ಜನಸಾಮಾನ್ಯರಿಗೂ ಗೊತ್ತಿದೆ. ಆದರೆ, ಜನರನ್ನು ಸಂಕುಚಿತ ನೆಲೆಯಲ್ಲಿ ಯೋಚಿಸುವಂತೆ ನಮ್ಮ ನಾಯಕರ ನಡವಳಿಕೆಗಳೇ ಪ್ರೇರೇಪಿಸುವಂತಿರುವುದು ದುರದೃಷ್ಟಕರ.