<p>ಅಂತರರಾಜ್ಯ ಬಸ್ ಸಂಚಾರ ಪುನರಾರಂಭದ ಕುರಿತು ರಾಜ್ಯ ಸರ್ಕಾರವು ವಿವಿಧ ರಾಜ್ಯಗಳಿಗೆ ಪತ್ರ ಬರೆದಿರುವುದಾಗಿ ವರದಿಯಾಗಿದೆ (ಪ್ರ.ವಾ., ಜೂನ್ 9). ವ್ಯವಹಾರದ ದೃಷ್ಟಿಯಿಂದ ಇದು ಸರಿ ಎನಿಸಿದರೂ ಆರೋಗ್ಯ ಸುರಕ್ಷತೆಯ ದೃಷ್ಟಿಯಿಂದ ಈ ಪ್ರಸ್ತಾವವನ್ನು ಮರು ಪರಿಶೀಲನೆಗೆ ಒಳಪಡಿಸುವುದು ಒಳ್ಳೆಯದು.</p>.<p>ಮಹಾರಾಷ್ಟ್ರ ಬಿಟ್ಟು ಇತರ ನೆರೆಹೊರೆ ರಾಜ್ಯಗಳೊಡನೆ ಬಸ್ ಸಂಚಾರ ಪುನರಾರಂಭಿಸುವ ಇಂಗಿತವನ್ನು ಸಾರಿಗೆ ಸಚಿವರು<br />ವ್ಯಕ್ತಪಡಿಸಿದ್ದಾರೆ. ಆದರೆ ತೆಲಂಗಾಣವು ಮಹಾರಾಷ್ಟ್ರದೊಡನೆ ಗಡಿ ಹಂಚಿಕೊಂಡಿದೆ.</p>.<p>ಜನ ಅಲ್ಲಿಗೆ ತಲುಪಿ, ಅಲ್ಲಿಂದ ಬರುವ ಬಸ್ಸುಗಳಲ್ಲಿ ಕರ್ನಾಟಕಕ್ಕೆ ಬಂದು ಇಳಿದರೆ ಅವರನ್ನು ತಡೆಯುವುದೆಂತು? ಹಾಗೆಯೇ ತಮಿಳುನಾಡಿನಲ್ಲಿ ಅನಿಯಂತ್ರಿತವಾಗಿ ಕೊರೊನಾ ಸೋಂಕು ಹಬ್ಬುತ್ತಿರುವಾಗ ಅಲ್ಲಿಗೆ ಬಸ್ ಸಂಚಾರ ಆರಂಭಿಸಿದರೆ ಮತ್ತೆ ಅಪಾಯವನ್ನು ಆಹ್ವಾನಿಸಿದಂತೆಯೇ.</p>.<p>ಒಂದುವೇಳೆ ತಮಿಳುನಾಡಿಗೆ ಬಸ್ ಸಂಚಾರ ಆರಂಭಿಸದೆ ಕೇರಳಕ್ಕೆ ಆರಂಭಿಸಿದರೆ, ಜನ ತಮಿಳುನಾಡಿನಿಂದ ಕೇರಳಕ್ಕೆ ತೆರಳಿ ಆ ಮೂಲಕ ಇಲ್ಲಿಗೆ ಬರಬಹುದು. ಸರ್ಕಾರವು ಈ ಮೂಲಗಳಿಂದ ಸಂಪಾದಿಸುವ ಹಣದ ಹಲವು ಪಟ್ಟನ್ನು ಆ ರಾಜ್ಯಗಳಿಂದ ಬಸ್ಗಳಲ್ಲಿ ಬಂದು ಇಲ್ಲಿ ತಳವೂರುವ ಸೋಂಕಿತರ ಉಪಚಾರ, ಕ್ವಾರಂಟೈನ್ಗೆ ವ್ಯಯಿಸುವಂತೆ ಆಗಬಾರದು.</p>.<p><em><strong>-ನರೇಂದ್ರ,ಬೆಂಗಳೂರು</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಅಂತರರಾಜ್ಯ ಬಸ್ ಸಂಚಾರ ಪುನರಾರಂಭದ ಕುರಿತು ರಾಜ್ಯ ಸರ್ಕಾರವು ವಿವಿಧ ರಾಜ್ಯಗಳಿಗೆ ಪತ್ರ ಬರೆದಿರುವುದಾಗಿ ವರದಿಯಾಗಿದೆ (ಪ್ರ.ವಾ., ಜೂನ್ 9). ವ್ಯವಹಾರದ ದೃಷ್ಟಿಯಿಂದ ಇದು ಸರಿ ಎನಿಸಿದರೂ ಆರೋಗ್ಯ ಸುರಕ್ಷತೆಯ ದೃಷ್ಟಿಯಿಂದ ಈ ಪ್ರಸ್ತಾವವನ್ನು ಮರು ಪರಿಶೀಲನೆಗೆ ಒಳಪಡಿಸುವುದು ಒಳ್ಳೆಯದು.</p>.<p>ಮಹಾರಾಷ್ಟ್ರ ಬಿಟ್ಟು ಇತರ ನೆರೆಹೊರೆ ರಾಜ್ಯಗಳೊಡನೆ ಬಸ್ ಸಂಚಾರ ಪುನರಾರಂಭಿಸುವ ಇಂಗಿತವನ್ನು ಸಾರಿಗೆ ಸಚಿವರು<br />ವ್ಯಕ್ತಪಡಿಸಿದ್ದಾರೆ. ಆದರೆ ತೆಲಂಗಾಣವು ಮಹಾರಾಷ್ಟ್ರದೊಡನೆ ಗಡಿ ಹಂಚಿಕೊಂಡಿದೆ.</p>.<p>ಜನ ಅಲ್ಲಿಗೆ ತಲುಪಿ, ಅಲ್ಲಿಂದ ಬರುವ ಬಸ್ಸುಗಳಲ್ಲಿ ಕರ್ನಾಟಕಕ್ಕೆ ಬಂದು ಇಳಿದರೆ ಅವರನ್ನು ತಡೆಯುವುದೆಂತು? ಹಾಗೆಯೇ ತಮಿಳುನಾಡಿನಲ್ಲಿ ಅನಿಯಂತ್ರಿತವಾಗಿ ಕೊರೊನಾ ಸೋಂಕು ಹಬ್ಬುತ್ತಿರುವಾಗ ಅಲ್ಲಿಗೆ ಬಸ್ ಸಂಚಾರ ಆರಂಭಿಸಿದರೆ ಮತ್ತೆ ಅಪಾಯವನ್ನು ಆಹ್ವಾನಿಸಿದಂತೆಯೇ.</p>.<p>ಒಂದುವೇಳೆ ತಮಿಳುನಾಡಿಗೆ ಬಸ್ ಸಂಚಾರ ಆರಂಭಿಸದೆ ಕೇರಳಕ್ಕೆ ಆರಂಭಿಸಿದರೆ, ಜನ ತಮಿಳುನಾಡಿನಿಂದ ಕೇರಳಕ್ಕೆ ತೆರಳಿ ಆ ಮೂಲಕ ಇಲ್ಲಿಗೆ ಬರಬಹುದು. ಸರ್ಕಾರವು ಈ ಮೂಲಗಳಿಂದ ಸಂಪಾದಿಸುವ ಹಣದ ಹಲವು ಪಟ್ಟನ್ನು ಆ ರಾಜ್ಯಗಳಿಂದ ಬಸ್ಗಳಲ್ಲಿ ಬಂದು ಇಲ್ಲಿ ತಳವೂರುವ ಸೋಂಕಿತರ ಉಪಚಾರ, ಕ್ವಾರಂಟೈನ್ಗೆ ವ್ಯಯಿಸುವಂತೆ ಆಗಬಾರದು.</p>.<p><em><strong>-ನರೇಂದ್ರ,ಬೆಂಗಳೂರು</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>