<p class="Briefhead">ಕೊರೊನಾ ಸೋಂಕು ನಮಗೆ ಅನೇಕ ಪಾಠಗಳನ್ನು ಕಲಿಸಿದೆ. ಇದರಲ್ಲಿ ವಾಯುಮಾಲಿನ್ಯ ತಡೆಯುವುದು, ಸ್ವಚ್ಛತೆ, ಸ್ವಾವಲಂಬನೆ ಮುಖ್ಯವಾದವು. ವಾಯುಮಾಲಿನ್ಯ ತಡೆಯಲು ನಾವೆಲ್ಲರೂ ಅಶಕ್ತರಾಗಿದ್ದಾಗ, ಪ್ರಕೃತಿಯೇ ಮುನಿದು ಎಲ್ಲ ಬಗೆಯ ವಾಹನ ಸಂಚಾರವೂ ಸಂಪೂರ್ಣ ಸ್ಥಗಿತಗೊಳ್ಳುವಂತೆ ನೋಡಿಕೊಂಡಿತು. ಇದರಿಂದ ಈ ವಾಹನಗಳು ಹೊರಹಾಕುವ ಇಂಗಾಲದ ಡೈಆಕ್ಸೈಡ್ ಹಾಗೂ ಹಾಳಾದ ರಸ್ತೆಗಳಿಂದ ಏಳುತ್ತಿದ್ದ ದೂಳು ಕಡಿಮೆಯಾದವು. ಈ ಬಾರಿ ಉತ್ತಮ ಮುಂಗಾರು ಮಳೆ ಆಗಲು ಈ ಬಗೆಯ ವೈಜ್ಞಾನಿಕ ಕಾರಣಗಳೂ ಇರಬಹುದೇನೊ? ವಿಶೇಷವಾಗಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಹತ್ತಾರು ವರ್ಷಗಳಿಂದ ಸರಿಯಾಗಿ ಮುಂಗಾರು ಮಳೆಯೇ ಆಗುತ್ತಿರಲಿಲ್ಲ. ಆದರೆ ಈ ವರ್ಷ ಸಂತೃಪ್ತ ಮುಂಗಾರು ಮಳೆಯಾಗಿದ್ದು ರೈತರ ಮುಖದಲ್ಲಿ ಮಂದಹಾಸ ಮೂಡಿದೆ. ಇನ್ನಾದರೂ ನಾವು ಪಾಠ ಕಲಿತು, ವಾಯುಮಾಲಿನ್ಯ ನಿಯಂತ್ರಣಕ್ಕೆ ಪ್ರಯತ್ನಿಸೋಣ. ಪರಿಸರಸ್ನೇಹಿ ವಾಹನಗಳಿಗೆ ಹೆಚ್ಚು ಪ್ರಾಮುಖ್ಯ ಸಿಗುವಂತಾಗಲಿ.</p>.<p><strong>- ಗೋಡೆ ಶಿವರಾಜ್, ಸಿ<span class="Designate">ರಿಗೇರಿ, ಬಳ್ಳಾರಿ</span></strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="Briefhead">ಕೊರೊನಾ ಸೋಂಕು ನಮಗೆ ಅನೇಕ ಪಾಠಗಳನ್ನು ಕಲಿಸಿದೆ. ಇದರಲ್ಲಿ ವಾಯುಮಾಲಿನ್ಯ ತಡೆಯುವುದು, ಸ್ವಚ್ಛತೆ, ಸ್ವಾವಲಂಬನೆ ಮುಖ್ಯವಾದವು. ವಾಯುಮಾಲಿನ್ಯ ತಡೆಯಲು ನಾವೆಲ್ಲರೂ ಅಶಕ್ತರಾಗಿದ್ದಾಗ, ಪ್ರಕೃತಿಯೇ ಮುನಿದು ಎಲ್ಲ ಬಗೆಯ ವಾಹನ ಸಂಚಾರವೂ ಸಂಪೂರ್ಣ ಸ್ಥಗಿತಗೊಳ್ಳುವಂತೆ ನೋಡಿಕೊಂಡಿತು. ಇದರಿಂದ ಈ ವಾಹನಗಳು ಹೊರಹಾಕುವ ಇಂಗಾಲದ ಡೈಆಕ್ಸೈಡ್ ಹಾಗೂ ಹಾಳಾದ ರಸ್ತೆಗಳಿಂದ ಏಳುತ್ತಿದ್ದ ದೂಳು ಕಡಿಮೆಯಾದವು. ಈ ಬಾರಿ ಉತ್ತಮ ಮುಂಗಾರು ಮಳೆ ಆಗಲು ಈ ಬಗೆಯ ವೈಜ್ಞಾನಿಕ ಕಾರಣಗಳೂ ಇರಬಹುದೇನೊ? ವಿಶೇಷವಾಗಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಹತ್ತಾರು ವರ್ಷಗಳಿಂದ ಸರಿಯಾಗಿ ಮುಂಗಾರು ಮಳೆಯೇ ಆಗುತ್ತಿರಲಿಲ್ಲ. ಆದರೆ ಈ ವರ್ಷ ಸಂತೃಪ್ತ ಮುಂಗಾರು ಮಳೆಯಾಗಿದ್ದು ರೈತರ ಮುಖದಲ್ಲಿ ಮಂದಹಾಸ ಮೂಡಿದೆ. ಇನ್ನಾದರೂ ನಾವು ಪಾಠ ಕಲಿತು, ವಾಯುಮಾಲಿನ್ಯ ನಿಯಂತ್ರಣಕ್ಕೆ ಪ್ರಯತ್ನಿಸೋಣ. ಪರಿಸರಸ್ನೇಹಿ ವಾಹನಗಳಿಗೆ ಹೆಚ್ಚು ಪ್ರಾಮುಖ್ಯ ಸಿಗುವಂತಾಗಲಿ.</p>.<p><strong>- ಗೋಡೆ ಶಿವರಾಜ್, ಸಿ<span class="Designate">ರಿಗೇರಿ, ಬಳ್ಳಾರಿ</span></strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>