ಕೆಲವು ಟಿ.ವಿ ಮತ್ತು ಪತ್ರಿಕೆಗಳನ್ನು ನೋಡಿದರೆ, ಅವು ಒಂದು ಪಕ್ಷದ ಪರ ವಾಲಿರುವುದು ಜನಸಾಮಾನ್ಯನಿಗೂ ಅರ್ಥವಾಗುತ್ತದೆ. ನಿಖರ, ನೇರ, ಸತ್ಯ ಆಧಾರಿತ ವರದಿಗಳು ಸಾಮಾನ್ಯ ಪ್ರಜೆಗೆ ಸಿಗುವುದು ಕಷ್ಟ ಎಂಬಂತಾಗಿದೆ. ರಾಜಕಾರಣಿಗಳು, ಸರ್ಕಾರ, ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು ಎಂದು ಪ್ರತಿದಿನ ವರದಿ ಮಾಡುವ ಮಾಧ್ಯಮಗಳು ಸ್ವತಃ ಎಚ್ಚೆತ್ತುಕೊಳ್ಳಬೇಕಾದ ಅಗತ್ಯವಿದೆ.
-ಎಸ್.ನಾಗರಾಜ ನಾಗೂರ, ಬಾಗಲಕೋಟೆ