ಇಡೀ ವಿಶ್ವ ತನ್ನ ಕಡೆ ತಿರುಗಿನೋಡುವಂತೆ ಸೋಲಾರ್ ಪಾರ್ಕ್ ನಿರ್ಮಾಣವಾಗಿ ಪಾವಗಡ ಬೆಳಗುತ್ತಿರುವುದು ಸಂತೋಷದ ವಿಷಯ. ಆಂಧ್ರಪ್ರದೇಶದ ಗಡಿ ಹಂಚಿಕೊಂಡಿರುವ ಈ ತಾಲ್ಲೂಕು ಅಷ್ಟೇ ಸಮಸ್ಯೆಗಳನ್ನೂ ತನ್ನಲ್ಲಿ ಇಟ್ಟುಕೊಂಡಿದೆ. ಯಾವುದೇ ನದಿ, ನಾಲೆ ಆಸರೆ ಇಲ್ಲದ ಮತ್ತು ಅಂತರ್ಜಲ ಪಾತಾಳ ಮುಟ್ಟಿರುವ ಇದು ಶಾಶ್ವತ ಬರಪೀಡಿತ ಪ್ರದೇಶ. ಇಲ್ಲಿನ ರೈತರ ಬದುಕು ಕಷ್ಟಕರವಾಗಿದೆ. ಯುವಜನ ಬೇರೆ ದಾರಿಯಿಲ್ಲದೆ ಬದುಕಿಗಾಗಿ ರಾಜಧಾನಿ ಬೆಂಗಳೂರನ್ನು ಅಶ್ರಯಿಸುತ್ತಿದ್ದಾರೆ.