ಇಷ್ಟೆಲ್ಲಾ ನಡೆದದ್ದು ‘ತುಂಗಾ ಮೂಲ ಉಳಿಸಿ’ ಹೋರಾಟದಲ್ಲಿ ಹತ್ತಾರು ವರ್ಷ ಸಕ್ರಿಯವಾಗಿ ಭಾಗವಹಿಸಿದ್ದ ಮತ್ತು ತಮ್ಮ ಕೃತಿಗಾಗಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿರುವ ಕಲ್ಕುಳಿ ವಿಠಲ ಹೆಗ್ಡೆ ಅವರು ಚಿಕ್ಕಮಗಳೂರು ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಬಾರದು ಎಂಬುದಕ್ಕಾಗಿ. ಸ್ವಾಯತ್ತ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು
ಪ್ರಾರಂಭದಲ್ಲಿಯೇ ಜಿಲ್ಲಾ ಆಯ್ಕೆ ಸಮಿತಿಯ ಪರವಾಗಿ ನಿಂತು, ‘ಯಾರು ಅಧ್ಯಕ್ಷರಾಗಬೇಕು ಎಂಬುದನ್ನು ಆಯ್ಕೆ ಸಮಿತಿ ನಿರ್ಧರಿಸುತ್ತದೆ, ಸರ್ಕಾರವಲ್ಲ’ ಎಂದು ಘೋಷಿಸಬೇಕಿತ್ತು. ಆದರೆ, ಅಧ್ಯಕ್ಷರು ದಿವ್ಯ ಮೌನ ಧರಿಸಿದರು. ಇಷ್ಟೆಲ್ಲಾ ನಡೆದುದು ವಾಗ್ದೇವತೆಯ ಸನ್ನಿಧಿಯಲ್ಲಿ ಎಂಬುದನ್ನು ಗಮನಿಸಿದಾಗ ಆಶ್ಚರ್ಯವಾಗುತ್ತದೆ, ದುಃಖವಾಗುತ್ತದೆ.