ಜ್ಞಾನಪೀಠ ಪ್ರಶಸ್ತಿ ಪಡೆದವರೆಲ್ಲ ಸಮರ್ಥರು. ಆದರೆ ಡಿವಿಜಿ, ತೇಜಸ್ವಿಯವರಂತಹ ಇನ್ನೂ ಕೆಲವು ಸಮರ್ಥ ಸಾಹಿತಿಗಳು ಜ್ಞಾನಪೀಠಿಗಳಲ್ಲ! ರಾಷ್ಟ್ರಕವಿ ಪದವಿ ನಿರಂತರವಾಗಿ ಇದ್ದರೆ ಇಂತಹ ಪ್ರಾತಿನಿಧಿತ್ವದ ಕೊರತೆಯನ್ನು ತಕ್ಕಮಟ್ಟಿಗೆ ತುಂಬುತ್ತದೆ. ಕನ್ನಡ ಸಾಹಿತ್ಯ ಪರಿಷತ್ತಿನ ಜೊತೆಗೆ ಬಹುತೇಕ ಕನ್ನಡ ಸಾಹಿತಿಗಳು ಸಹ ರಾಷ್ಟ್ರಕವಿ ಪದವಿ ಇರಲಿ ಎಂದೇ ಒತ್ತಾಯಿಸುತ್ತಾ ಬಂದಿದ್ದಾರೆ. ಸ್ಥಗಿತಗೊಳಿಸಿರುವ ಈ ಗೌರವವನ್ನು ಸರ್ಕಾರ ಇನ್ನು ಮುಂದಾದರೂ ಮರು ಆರಂಭಿಸಲಿ.