<p>ಚಾಮರಾಜನಗರ ಜಿಲ್ಲೆಯ ವಿವಿಧೆಡೆ ಇತ್ತೀಚೆಗೆ ಎರಡು ದಿನಗಳ ಅಂತರದಲ್ಲಿ ಒಂಬತ್ತು ಬಾಲ್ಯವಿವಾಹಗಳಿಗೆ ತಡೆಯೊಡ್ಡಿರುವುದು ಸಂತೋಷದ ಸಂಗತಿ. ಸಮಾಜವು ಉನ್ನತಿಯತ್ತ ಸಾಗುತ್ತಿದ್ದರೂ ಹಲವಾರು ಕಾರಣಗಳಿಂದ ಬಾಲ್ಯವಿವಾಹಕ್ಕೆ ಮುಂದಾಗುತ್ತಿರುವ ಜನರ ಮನಃಸ್ಥಿತಿಯ ಬಗ್ಗೆ ಬೇಸರವೆನಿಸುತ್ತದೆ. ಮೊಮ್ಮಕ್ಕಳ ಮದುವೆ ನೋಡ ಬೇಕೆಂಬ ಹಿರಿಯರ ಆಸೆ, ಸಮಾಜದಲ್ಲಿ ನಡೆಯುವ ಅತ್ಯಾಚಾರದ ಬಗ್ಗೆ ಹೆದರಿಕೆ, ಕುಟುಂಬದಲ್ಲಿ ಬಡತನವಿದ್ದಲ್ಲಿ ಶ್ರೀಮಂತ ವರ ಬಂದರೆ ವಯಸ್ಸಿನ ಅಂತರವನ್ನೂ ನೋಡದೆ ಮದುವೆ ಮಾಡಲು ಮುಂದಾಗುವಂತಹ ಹಲವು ಕಾರಣಗಳು ಇದರ ಹಿಂದೆ ಇರುತ್ತವೆ.</p>.<p>ಬಾಲ್ಯವಿವಾಹ ಮಾಡುವ ಪೋಷಕರಿಗೆ ನಂತರ ಆ ಮಕ್ಕಳು ಅನುಭವಿಸುವ ಸಂಕಷ್ಟಗಳ ಅರಿವಿರುವುದಿಲ್ಲ. ಈಗ ಕೊರೊನಾ ಸಂದರ್ಭದಲ್ಲಿ ಹಣದ ಮುಗ್ಗಟ್ಟಿನಿಂದ ಬಾಲ್ಯವಿವಾಹಗಳು ಹೆಚ್ಚಿನ ಸಂಖ್ಯೆಯಲ್ಲಿ ಜರುಗುವ ಸಂಭವವಿರುತ್ತದೆ. ಸಾರ್ವಜನಿಕರು, ಸಂಘ ಸಂಸ್ಥೆಗಳು, ಶಾಲಾ ಕಾಲೇಜುಗಳು ಬಾಲ್ಯವಿವಾಹದಿಂದ ಆಗುವ ತೊಂದರೆಗಳನ್ನು ಹೆಣ್ಣುಮಕ್ಕಳಿಗೆ ವಿವರಿಸಬೇಕು. ಬಾಲ್ಯವಿವಾಹ ತಡೆಗಟ್ಟುವುದನ್ನು ಸಾರ್ವಜನಿಕರು ಒಂದು ಪುಣ್ಯದ ಕೆಲಸವೆಂದೇ ತಿಳಿದು, ಇಂತಹ ಕೃತ್ಯ ಕಂಡುಬಂದರೆ ಕೂಡಲೇ ಪೊಲೀಸ್ ಠಾಣೆಗೆ ದೂರು ನೀಡಬೇಕು.</p>.<p><em><strong>ಎಂ.ಎಸ್.ಉಷಾ ಪ್ರಕಾಶ್,ಮೈಸೂರು</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಚಾಮರಾಜನಗರ ಜಿಲ್ಲೆಯ ವಿವಿಧೆಡೆ ಇತ್ತೀಚೆಗೆ ಎರಡು ದಿನಗಳ ಅಂತರದಲ್ಲಿ ಒಂಬತ್ತು ಬಾಲ್ಯವಿವಾಹಗಳಿಗೆ ತಡೆಯೊಡ್ಡಿರುವುದು ಸಂತೋಷದ ಸಂಗತಿ. ಸಮಾಜವು ಉನ್ನತಿಯತ್ತ ಸಾಗುತ್ತಿದ್ದರೂ ಹಲವಾರು ಕಾರಣಗಳಿಂದ ಬಾಲ್ಯವಿವಾಹಕ್ಕೆ ಮುಂದಾಗುತ್ತಿರುವ ಜನರ ಮನಃಸ್ಥಿತಿಯ ಬಗ್ಗೆ ಬೇಸರವೆನಿಸುತ್ತದೆ. ಮೊಮ್ಮಕ್ಕಳ ಮದುವೆ ನೋಡ ಬೇಕೆಂಬ ಹಿರಿಯರ ಆಸೆ, ಸಮಾಜದಲ್ಲಿ ನಡೆಯುವ ಅತ್ಯಾಚಾರದ ಬಗ್ಗೆ ಹೆದರಿಕೆ, ಕುಟುಂಬದಲ್ಲಿ ಬಡತನವಿದ್ದಲ್ಲಿ ಶ್ರೀಮಂತ ವರ ಬಂದರೆ ವಯಸ್ಸಿನ ಅಂತರವನ್ನೂ ನೋಡದೆ ಮದುವೆ ಮಾಡಲು ಮುಂದಾಗುವಂತಹ ಹಲವು ಕಾರಣಗಳು ಇದರ ಹಿಂದೆ ಇರುತ್ತವೆ.</p>.<p>ಬಾಲ್ಯವಿವಾಹ ಮಾಡುವ ಪೋಷಕರಿಗೆ ನಂತರ ಆ ಮಕ್ಕಳು ಅನುಭವಿಸುವ ಸಂಕಷ್ಟಗಳ ಅರಿವಿರುವುದಿಲ್ಲ. ಈಗ ಕೊರೊನಾ ಸಂದರ್ಭದಲ್ಲಿ ಹಣದ ಮುಗ್ಗಟ್ಟಿನಿಂದ ಬಾಲ್ಯವಿವಾಹಗಳು ಹೆಚ್ಚಿನ ಸಂಖ್ಯೆಯಲ್ಲಿ ಜರುಗುವ ಸಂಭವವಿರುತ್ತದೆ. ಸಾರ್ವಜನಿಕರು, ಸಂಘ ಸಂಸ್ಥೆಗಳು, ಶಾಲಾ ಕಾಲೇಜುಗಳು ಬಾಲ್ಯವಿವಾಹದಿಂದ ಆಗುವ ತೊಂದರೆಗಳನ್ನು ಹೆಣ್ಣುಮಕ್ಕಳಿಗೆ ವಿವರಿಸಬೇಕು. ಬಾಲ್ಯವಿವಾಹ ತಡೆಗಟ್ಟುವುದನ್ನು ಸಾರ್ವಜನಿಕರು ಒಂದು ಪುಣ್ಯದ ಕೆಲಸವೆಂದೇ ತಿಳಿದು, ಇಂತಹ ಕೃತ್ಯ ಕಂಡುಬಂದರೆ ಕೂಡಲೇ ಪೊಲೀಸ್ ಠಾಣೆಗೆ ದೂರು ನೀಡಬೇಕು.</p>.<p><em><strong>ಎಂ.ಎಸ್.ಉಷಾ ಪ್ರಕಾಶ್,ಮೈಸೂರು</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>