<p class="Briefhead">ಧಾರವಾಡ- ಮೈಸೂರು- ಧಾರವಾಡ ಎಕ್ಸ್ಪ್ರೆಸ್ ರೈಲು ದಿನನಿತ್ಯ ಸಾವಿರಾರು ಪ್ರಯಾಣಿಕರನ್ನು ಎರಡೂ ನಗರಗಳಿಂದ ಕರೆದೊಯ್ಯುವ ಕಾಯಕವನ್ನು ನಿತ್ಯವೂ ಮಾಡುತ್ತಿತ್ತು. ಸಾಮಾನ್ಯ ಬೋಗಿ ಮತ್ತು ಹವಾನಿಯಂತ್ರಿತ ಬೋಗಿಗಳಲ್ಲೂ ಆಸನಗಳು ಸಿಗದೆ ಪ್ರಯಾಣಿಕರು ಪರದಾಡುತ್ತಿ<br />ದ್ದರು. ಕೋವಿಡ್– 19ರ ಕಾರಣವಾಗಿ ಮಾರ್ಚ್ನಿಂದ ತಾತ್ಕಾಲಿಕವಾಗಿ ಈ ರೈಲು ಸ್ಥಗಿತಗೊಂಡಿರುವುದರಿಂದ ಪ್ರಯಾಣಿಕರು ಬಾಡಿಗೆ ವಾಹನದಲ್ಲೋ ಅಥವಾ ಸ್ವಂತ ವಾಹನದಲ್ಲೋ ಹುಬ್ಬಳ್ಳಿ, ಧಾರವಾಡ, ಮೈಸೂರು ನಗರಗಳಿಗೆ ಹೋಗಿಬರುತ್ತಿದ್ದಾರೆ.</p>.<p>ಬೆಳಗಾವಿ- ಮೈಸೂರು- ಚೆನ್ನೈ ವಿಮಾನಯಾನ ಇತ್ತೀಚೆಗೆ ಹೊಸದಾಗಿ ಪ್ರಾರಂಭವಾಗಿದೆ. ಕೆಲವೇ ಪ್ರಯಾಣಿಕರು ಈ ವಿಮಾನದಲ್ಲಿ ಪ್ರಯಾಣಿಸುತ್ತಿರಬಹುದು. ಸರ್ಕಾರವು ಉಳಿದ ಆಸನಗಳ ಪ್ರಯಾಣ ವೆಚ್ಚವನ್ನು ಉಡಾನ್ ಒಪ್ಪಂದದ ಅನ್ವಯ ವಿಮಾನಯಾನ ಸಂಸ್ಥೆಗೆ ವೃಥಾ ಪಾವತಿಸಬೇಕಾಗಿದೆ. ಇದಕ್ಕೆ ಪರ್ಯಾಯವಾಗಿ, ಇದೇ ವಿಮಾನವನ್ನು ಹುಬ್ಬಳ್ಳಿ ಮಾರ್ಗವಾಗಿ ಸಂಚರಿಸಲು ಅವಕಾಶ ಮಾಡಿಕೊಟ್ಟರೆ ಹುಬ್ಬಳ್ಳಿ- ಧಾರವಾಡ ಪ್ರಯಾಣಿಕರಿಂದ ವಿಮಾನ ಭರ್ತಿಯಾಗಿ ಕೇಂದ್ರ ಸರ್ಕಾರಕ್ಕೆ ಆರ್ಥಿಕ ಹೊರೆ ಕಡಿಮೆಯಾಗುತ್ತದೆ. ಅಲ್ಲದೆ, ಹುಬ್ಬಳ್ಳಿ- ಧಾರವಾಡ- ಮೈಸೂರು ಪ್ರಯಾಣಿಕರಿಗೆ ವಿಮಾನಯಾನದ ಸಂಪರ್ಕವನ್ನು ಕಲ್ಪಿಸಿದಂತಾಗುತ್ತದೆ. ಮೈಸೂರಿಗೆ ವಿಮಾನಯಾನ ಆರಂಭವಾದಾಗಿನಿಂದ ಇರುವ ಈ ಬೇಡಿಕೆಯನ್ನು ಈಡೇರಿಸಿದಂತೆಯೂ ಆಗುತ್ತದೆ.</p>.<p><strong>- ಡಾ. ಸಿದ್ಧಲಿಂಗಸ್ವಾಮಿ ಹಿರೇಮಠ, <span class="Designate">ಮೈಸೂರು</span></strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="Briefhead">ಧಾರವಾಡ- ಮೈಸೂರು- ಧಾರವಾಡ ಎಕ್ಸ್ಪ್ರೆಸ್ ರೈಲು ದಿನನಿತ್ಯ ಸಾವಿರಾರು ಪ್ರಯಾಣಿಕರನ್ನು ಎರಡೂ ನಗರಗಳಿಂದ ಕರೆದೊಯ್ಯುವ ಕಾಯಕವನ್ನು ನಿತ್ಯವೂ ಮಾಡುತ್ತಿತ್ತು. ಸಾಮಾನ್ಯ ಬೋಗಿ ಮತ್ತು ಹವಾನಿಯಂತ್ರಿತ ಬೋಗಿಗಳಲ್ಲೂ ಆಸನಗಳು ಸಿಗದೆ ಪ್ರಯಾಣಿಕರು ಪರದಾಡುತ್ತಿ<br />ದ್ದರು. ಕೋವಿಡ್– 19ರ ಕಾರಣವಾಗಿ ಮಾರ್ಚ್ನಿಂದ ತಾತ್ಕಾಲಿಕವಾಗಿ ಈ ರೈಲು ಸ್ಥಗಿತಗೊಂಡಿರುವುದರಿಂದ ಪ್ರಯಾಣಿಕರು ಬಾಡಿಗೆ ವಾಹನದಲ್ಲೋ ಅಥವಾ ಸ್ವಂತ ವಾಹನದಲ್ಲೋ ಹುಬ್ಬಳ್ಳಿ, ಧಾರವಾಡ, ಮೈಸೂರು ನಗರಗಳಿಗೆ ಹೋಗಿಬರುತ್ತಿದ್ದಾರೆ.</p>.<p>ಬೆಳಗಾವಿ- ಮೈಸೂರು- ಚೆನ್ನೈ ವಿಮಾನಯಾನ ಇತ್ತೀಚೆಗೆ ಹೊಸದಾಗಿ ಪ್ರಾರಂಭವಾಗಿದೆ. ಕೆಲವೇ ಪ್ರಯಾಣಿಕರು ಈ ವಿಮಾನದಲ್ಲಿ ಪ್ರಯಾಣಿಸುತ್ತಿರಬಹುದು. ಸರ್ಕಾರವು ಉಳಿದ ಆಸನಗಳ ಪ್ರಯಾಣ ವೆಚ್ಚವನ್ನು ಉಡಾನ್ ಒಪ್ಪಂದದ ಅನ್ವಯ ವಿಮಾನಯಾನ ಸಂಸ್ಥೆಗೆ ವೃಥಾ ಪಾವತಿಸಬೇಕಾಗಿದೆ. ಇದಕ್ಕೆ ಪರ್ಯಾಯವಾಗಿ, ಇದೇ ವಿಮಾನವನ್ನು ಹುಬ್ಬಳ್ಳಿ ಮಾರ್ಗವಾಗಿ ಸಂಚರಿಸಲು ಅವಕಾಶ ಮಾಡಿಕೊಟ್ಟರೆ ಹುಬ್ಬಳ್ಳಿ- ಧಾರವಾಡ ಪ್ರಯಾಣಿಕರಿಂದ ವಿಮಾನ ಭರ್ತಿಯಾಗಿ ಕೇಂದ್ರ ಸರ್ಕಾರಕ್ಕೆ ಆರ್ಥಿಕ ಹೊರೆ ಕಡಿಮೆಯಾಗುತ್ತದೆ. ಅಲ್ಲದೆ, ಹುಬ್ಬಳ್ಳಿ- ಧಾರವಾಡ- ಮೈಸೂರು ಪ್ರಯಾಣಿಕರಿಗೆ ವಿಮಾನಯಾನದ ಸಂಪರ್ಕವನ್ನು ಕಲ್ಪಿಸಿದಂತಾಗುತ್ತದೆ. ಮೈಸೂರಿಗೆ ವಿಮಾನಯಾನ ಆರಂಭವಾದಾಗಿನಿಂದ ಇರುವ ಈ ಬೇಡಿಕೆಯನ್ನು ಈಡೇರಿಸಿದಂತೆಯೂ ಆಗುತ್ತದೆ.</p>.<p><strong>- ಡಾ. ಸಿದ್ಧಲಿಂಗಸ್ವಾಮಿ ಹಿರೇಮಠ, <span class="Designate">ಮೈಸೂರು</span></strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>