ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೋಷ ಸರಿಪಡಿಸಲು ಹಲ್ಲೆ ಪರಿಹಾರವೇ?

ಅಕ್ಷರ ಗಾತ್ರ

‘ಪಠ್ಯಪುಸ್ತಕಗಳಲ್ಲಿನ ದೋಷಗಳನ್ನು ಸಾರ್ವಜನಿಕರು ಗಂಭೀರವಾಗಿ ಗಮನಿಸಿದ್ದರೆ ಸಂಬಂಧಿಸಿದವರ ಮೇಲೆ ಹಲ್ಲೆ ನಡೆಸುತ್ತಿದ್ದರು’ ಎಂದು ಶಿಕ್ಷಣ ಸಚಿವರು ಪ್ರಚೋದನಾತ್ಮಕ ಹೇಳಿಕೆ ನೀಡಿದ್ದಾರೆ. ಆದರೆ ಅವರು ಪಠ್ಯಪುಸ್ತಕಗಳ ಯಾವ ಭಾಗಗಳಲ್ಲಿ ಅಂತಹ ದೋಷಗಳಿವೆ ಎಂಬುದನ್ನು ತಿಳಿಸಿಲ್ಲ. ಸಚಿವರ ಪ್ರಕಾರ, ದೋಷಗಳನ್ನು ಸರಿಪಡಿಸಲು ‘ಹಲ್ಲೆ’ ಪರಿಹಾರ ಎಂಬಂತಾಗಿದೆ.

ಕಳೆದ 18 ತಿಂಗಳುಗಳಿಂದ ಗ್ರಾಮೀಣ ಪ್ರದೇಶದ 1ರಿಂದ 10ನೇ ತರಗತಿಯ ಮಕ್ಕಳು ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸುಮಾರು 25 ಲಕ್ಷ ಮಕ್ಕಳು ಆನ್‌ಲೈನ್ ಪಾಠಕ್ಕೆ ನೆಟ್‍ವರ್ಕ್ ಸಿಗದೆ ವಂಚಿತರಾಗಿದ್ದಾರೆ. ಇದುವರೆಗೆ ಈ ಸಮಸ್ಯೆಯ ಬಗ್ಗೆ ಸರ್ಕಾರ ಚಕಾರವೆತ್ತಿಲ್ಲ. ಇಲ್ಲಿನ ವಿಶೇಷವನ್ನು ಗಮನಿಸಬೇಕು. ಕಳೆದ 20-25 ತಿಂಗಳುಗಳಿಂದ ಪಠ್ಯಪುಸ್ತಕಗಳ ಬಗ್ಗೆ ವಿವಾದ ಹುಟ್ಟುಹಾಕುತ್ತಿರುವವರಲ್ಲಿ ಹೆಚ್ಚಿನವರು ಚಾತುರ್ವರ್ಣೀಯ ರಾಗಿದ್ದಾರೆ, ಏಕೆ?

- ಟಿ.ಆರ್.ಚಂದ್ರಶೇಖರ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT