ತಿಂಗಳಿಗೆ ಲಕ್ಷಗಟ್ಟಲೆ ನೆಲಬಾಡಿಗೆಯನ್ನು ಸರ್ಕಾರಕ್ಕೆ ಕಟ್ಟಿ ಇಂತಹ ಸಾಂಸ್ಕೃತಿಕ ಅಧ್ಯಯನ ಸಂಸ್ಥೆಗಳನ್ನು ನಡೆಸಲು ಸಾಧ್ಯವಿಲ್ಲ. ಈ ರೀತಿಯ ಸಂಸ್ಥೆಗಳನ್ನು ಸಹಾಯಧನ ನೀಡಿ ನಡೆಸುವುದು ಸರ್ಕಾರದ ಜವಾಬ್ದಾರಿ. ಬಿಬಿಎಂಪಿ ಅಧಿಕಾರಿಗಳು ಇಂತಹ ಸಂಸ್ಥೆಗಳ ವಿಚಾರದಲ್ಲಿ ಮುಖ್ಯಮಂತ್ರಿಯವರ ಆದೇಶವನ್ನೂ ಪಾಲಿಸದಿದ್ದಾಗ, ತಪ್ಪು ಮಾಡುತ್ತಿರುವ ಅಧಿಕಾರಿಗಳ ಕಿವಿ ಹಿಂಡಿ ಸರಿಯಾಗಿ ಕೆಲಸ ನಡೆಯುವಂತೆ ಮಾಡುವ ಜವಾಬ್ದಾರಿ ಸಂಬಂಧಿಸಿದ ಮಂತ್ರಿಗಳ ಮೇಲಿರುತ್ತದೆ. ಆದರೆ ಅವರಿಗೆ ಈ ರೀತಿಯ ಕೆಲಸಗಳು ಮಹತ್ವವಾದವು ಎಂಬ ನಂಬಿಕೆ ಇರಬೇಕು ಮತ್ತು ಅವರು ಇಂತಹ ವರದಿಗಳನ್ನು ಓದಿ ಕಾರ್ಯಪ್ರವೃತ್ತರಾಗಬಲ್ಲವರೂ ಆಗಿರಬೇಕು.
-ಎಸ್.ಆರ್.ವಿಜಯಶಂಕರ,ಬೆಂಗಳೂರು