ಒಂದು ಭಾಷೆ ಯನ್ನಾಡುವ ಜನ ಒಂದೆಡೆ ಇರಬೇಕು, ಶಿಕ್ಷಣ ಮಾಧ್ಯಮವು ರಾಜ್ಯ ಭಾಷೆಯಲ್ಲಿ ಇರಬೇಕು, ಆಡಳಿತವೂ ಆ ಭಾಷೆಯಲ್ಲಿ ನಡೆದರೆ ಜನರಿಗೆ ಎಲ್ಲ ವಿಷಯಗಳು ಮನದಟ್ಟಾಗುತ್ತವೆ, ಪ್ರಜಾಪ್ರಭುತ್ವ ವ್ಯವಸ್ಥೆ ಸಹ ಗಟ್ಟಿಯಾಗುತ್ತದೆ ಎಂಬುದನ್ನು ನಮ್ಮ ಹಿರಿಯರು ಅರ್ಥ ಮಾಡಿಕೊಂಡಿದ್ದರು. ಈ ಬಗ್ಗೆ ಚಿಂತಿಸದೆ, ಶಿಕ್ಷಣ ತಜ್ಞರ ಅಭಿ ಪ್ರಾಯವನ್ನೂ ಕೇಳದೆ ಸರ್ಕಾರ ನಿರ್ಣಯ ಕೈಗೊಂಡಿರುವುದು ಖಂಡನೀಯ.