ಕೊರೊನಾದ ಇಂದಿನ ಸಂಕಷ್ಟ ಪರಿಸ್ಥಿತಿಯಲ್ಲೂ ಜನಪ್ರತಿನಿಧಿಗಳಿಗೆ ಸನ್ಮಾನ ಮಾಡುವ, ಅದರಲ್ಲೂ ಚಿನ್ನದ ಕಿರೀಟ,ಕತ್ತಿ,ಗದೆ ಮುಂತಾದವನ್ನು ಜನಸಾಮಾನ್ಯರು ಕೊಡುವ ಔಚಿತ್ಯ ಏನೆಂದು ಅರ್ಥವಾಗುತ್ತಿಲ್ಲ.
ಒಂದು ವೇಳೆ ಮಹತ್ವವಾದ ಕೆಲಸಗಳನ್ನು ಮಾಡಿದ್ದರೂ ತಮ್ಮ ಅಭಿಮಾನಿಗಳು ಎಂದು ಕರೆದುಕೊಳ್ಳುವವರುಎಷ್ಟೇ ಒತ್ತಾಯ ಮಾಡಿದರೂ ಜನನಾಯಕರುಮನಸ್ಸುಮಾಡಿದರೆ ಇಂತಹ ಪ್ರಹಸನನಡೆಯದಂತೆ ನೋಡಿಕೊಳ್ಳಬಹುದು. ಕೇವಲ ತಮ್ಮ ಒಣಪ್ರತಿಷ್ಠೆಗೆಹಾಗೂ ಬಲಾಬಲ ಪ್ರದರ್ಶಿಸುವ ಈ ಪದ್ಧತಿಗೆ ಮಂಗಳ ಹಾಡಬೇಕಿದೆ. –ಕಡೂರುಫಣಿಶಂಕರ್,ಬೆಂಗಳೂರು