ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್ಆರ್ಟಿಸಿ) ಬಸ್ಗಳಿಗಾಗಿ ಪ್ರಯಾಣಿಕರು ಕಾಯಲು ಹೋಬಳಿ, ತಾಲ್ಲೂಕು, ಜಿಲ್ಲಾ, ವಿಭಾಗ ಮಟ್ಟದಲ್ಲಿ ಬಸ್ ನಿಲ್ದಾಣಗಳನ್ನು, ಮಹಾನಗರಗಳಲ್ಲಿ ನಗರ ಸಾರಿಗೆ ಬಸ್ ಪ್ರಯಾಣಿಕರಿಗಾಗಿ ತಂಗುದಾಣಗಳನ್ನು ಕಟ್ಟಲಾಗಿದೆ. ಬಸ್ಗಳ ರಿಪೇರಿ, ನಿರ್ವಹಣೆಗಾಗಿ ರಾಜ್ಯದಾದ್ಯಂತ ಬಸ್ ಡಿಪೊಗಳನ್ನು ನಿರ್ಮಿಸಲಾಗಿದೆ. ಇವೆಲ್ಲವೂ ಕಾಂಕ್ರೀಟ್ ಕಟ್ಟಡಗಳಾಗಿದ್ದು, ಇವುಗಳ ಮೇಲ್ಭಾಗದಲ್ಲಿ ಸೌರ ವಿದ್ಯುತ್ ಉತ್ಪಾದನೆಗೆ ಸಾರಿಗೆ ಇಲಾಖೆ ಮುಂದಾಗುವುದು ವ್ಯಾವಹಾರಿಕವಾಗಿ ಲಾಭದಾಯಕವಾಗುತ್ತದೆ.