ಕಾಡು ಉಳಿಯಬೇಕು. ಇದು ಅನಿವಾರ್ಯ ಮತ್ತು ಅಗತ್ಯ ಕೂಡ. ಆದರೆ, ಕಾಡಿನಂಚಿನಲ್ಲಿ ವಾಸಿಸುತ್ತಿರುವವರಿಗೂ ಬದುಕುವ ಹಕ್ಕಿದೆ, ಅವರೂ ಮೂಲ ಸೌಕರ್ಯ ಪಡೆಯಲು ಅರ್ಹರು ಎನ್ನುವುದನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕಾಗಿದೆ. ಅರಣ್ಯದ ಪ್ರಮಾಣ ಒಂದಿಷ್ಟಾದರೂ ಉಳಿದಿದೆ ಎನ್ನುವುದಾದರೆ ಅದು ಇಂತಹವರಿಂದಲೇ ಎನ್ನುವ ಸತ್ಯವನ್ನು ಮರೆಯಬಾರದು.