ನಂಜನಗೂಡು ತಾಲ್ಲೂಕಿನ ಹಲ್ಲರೆ ಎಂಬ ಗ್ರಾಮದಲ್ಲಿ ಪರಿಶಿಷ್ಟ ಜಾತಿಗೆ ಸೇರಿದವರ ಕ್ಷೌರ ಮಾಡಿದ್ದಕ್ಕಾಗಿ ಸವಿತಾ ಸಮುದಾಯದ ಕುಟುಂಬವೊಂದಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಲಾಗಿದೆ ಎಂಬ ವಿಷಯ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ನಾಗರಿಕ ಸಮಾಜದಲ್ಲಿ ಇಂತಹ ನಡವಳಿಕೆ ತರವೇ? ಇದಕ್ಕೆಲ್ಲ ಕೊನೆಯಾದರೂ ಯಾವಾಗ? ಬಹಿಷ್ಕಾರ ಹಾಕಿದವರಿಗೆ ಕಠಿಣ ಶಿಕ್ಷೆಯಾಗಲಿ. ಈ ತರಹದ ಪ್ರಸಂಗಗಳು ಮರುಕಳಿಸದಿರಲಿ.