ತಮ್ಮ ಈ ಆಟಕ್ಕೆ ಕ್ಷೇತ್ರದ ಅಭಿವೃದ್ಧಿ, ಜನರ ಸಮಸ್ಯೆಗಳನ್ನು ಮುಂದಿಡುವುದು ವಿಪರ್ಯಾಸ. ಅವುಗಳೇ ನಿಜವಾದ ಕಾರಣವಾಗಿದ್ದರೆ, ಈ ಶಕ್ತಿ ಕೇಂದ್ರದಲ್ಲಿಯೇ ಕುಳಿತು ಏಕೆ ಆ ಬಗ್ಗೆ ಚರ್ಚಿಸಲು ಮುಂದಾಗುವುದಿಲ್ಲ? ಇಲ್ಲವಾದರೆ, ತಮ್ಮ ಕ್ಷೇತ್ರಗಳಲ್ಲಿ ಬಹಿರಂಗ ಸಮಾರಂಭಗಳನ್ನು ನಡೆಸಿ, ತಮ್ಮ ಸಂಕಷ್ಟಗಳನ್ನು ಜನರ ಮುಂದಿಡಲಿ. ಆಗ ಜನರಿಗೂ ಸತ್ಯಾಸತ್ಯತೆ ಏನೆಂಬುದು ತಿಳಿಯುತ್ತದೆ.