ಈ ಗುಂಪಿನಲ್ಲಿ ‘ಸಾಮಾಜಿಕ ನ್ಯಾಯ’ದ ಫಲಾನುಭವಿಗಳಾದ ದಲಿತ, ಹಿಂದುಳಿದ, ಮಹಿಳೆ ಮತ್ತು ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದ ವಿದ್ಯಾವಂತ ಯುವ ಸಮುದಾಯ ಇರುವ ಸಂಗತಿಯನ್ನು ನಾವು ಜಿ.ಎನ್.ದೇವಿ ಅವರು ಗುರುತಿಸುವಂತೆ, ಅಮ್ನೀಷಿಯಕ್ಕೆ ಒಳಗಾದ ತಲೆಮಾರು ಎನ್ನಬಹುದೇನೋ ಅಥವಾ ಮಾರ್ಕ್ಸ್ ಗುರುತಿಸಿದಂತೆ, ಧರ್ಮ, ಹುಸಿ ಅಸ್ಮಿತೆಗಳ ಅಫೀಮಿಗೆ ಒಳಗಾದ ಜನಾಂಗ ಎನ್ನಬಹುದೇ? ಅಂದಹಾಗೆ ‘ಸಾಮಾಜಿಕ ನ್ಯಾಯ’ವನ್ನು ದುರ್ಬಲಗೊಳಿಸುವುದರ ನಿಜವಾದ ಅರ್ಥ ‘ಸಂವಿಧಾನದ ಆಶಯ’ಗಳನ್ನು ದುರ್ಬಲಗೊಳಿಸುವುದು ಎಂಬುದನ್ನಾದರೂ ನಾವು ಗುರುತಿಸಿಕೊಳ್ಳಬೇಕಿದೆ.