ಚತುಷ್ಪಥ, ದಶಪಥಗಳ ಧಾವಂತದ ಜೀವನ ಬೇಕೆ? ಇದಕ್ಕಾಗಿ ಖರ್ಚು ಮಾಡುತ್ತಿರುವ ಕೋಟಿಗಟ್ಟಲೆ ಹಣದಿಂದ ನಿರೀಕ್ಷಿತ ಅಭಿವೃದ್ಧಿ ಸಾಧ್ಯವೇ? ಪರಿಸರ ವಿರೋಧಿ ಯೋಜನೆಗಳನ್ನು ಹಮ್ಮಿಕೊಂಡು ಜೀವಿಗಳು, ಪರಿಸರವನ್ನು ಹಾಳುಗೆಡಹುವುದೇಕೆ? ಅದೇ ಹಣದಿಂದ ಜನರಿಗೆ ಅಗತ್ಯವಾದ ಮೂಲಸೌಕರ್ಯಗಳನ್ನು ಒದಗಿಸಬಹುದಲ್ಲವೇ? ಸರ್ಕಾರಿ ಶಾಲೆಗಳ ಉನ್ನತೀಕರಣ, ಆರೋಗ್ಯ ಸವಲತ್ತುಗಳ ಅಭಿವೃದ್ಧಿ ಮುಖ್ಯವೇ ಅಥವಾ ಜೋಗದಲ್ಲಿ ಕೇಬಲ್ ಕಾರ್ ಮುಖ್ಯವೇ? ಪ್ರಕೃತಿಯನ್ನು ನಿಕೃಷ್ಟವಾಗಿ ಕಾಣುತ್ತಿರುವುದರ ಪರಿಣಾಮವಾಗಿ ಕೊರೊನಾ ತಂದ ತಲ್ಲಣ ಗಮನಕ್ಕೆ ಬಾರದೇ ಹೋಗುತ್ತಿದೆಯಲ್ಲಾ. ಪ್ರತಿಸಲವೂ ಪರಿಸರಾಸಕ್ತರ ಮನವಿಯನ್ನು ಕಡೆಗಣಿಸಿ, ಅವರನ್ನು ವ್ಯಾಧಿಯೆಂದು ಪರಿಗಣಿಸಿರುವ ಜನರಿಗೆ ಬೆಳಕು ತೋರಿಸುವವರಾರು?