‘ಭಾರಿ ಸದ್ದಿಗೆ ಅಂಪನ್ ಚಂಡಮಾರುತ ಕಾರಣ’ ಎಂಬ ನನ್ನ ಹೇಳಿಕೆಗೆ ಡಾ. ಎಂ.ವೆಂಕಟಸ್ವಾಮಿ ಮತ್ತು ಇತರರು ಬರೆದ ಪತ್ರಕ್ಕೆ (ವಾ.ವಾ., ಮೇ 27) ಈ ಪ್ರತಿಕ್ರಿಯೆ. ಬೆಂಗಳೂರಿನಲ್ಲಿ ಮೇ 20ರಂದು ಕೇಳಿಬಂದ ಸ್ಫೋಟದ ಸದ್ದಿಗೆ ಯುದ್ಧವಿಮಾನ ಹಾರಾಟ ಖಂಡಿತ ಕಾರಣ ಅಲ್ಲ ಎಂದು ನಾನು ಈಗಲೂ ಹೇಳುತ್ತೇನೆ. ವಾತಾವರಣದಲ್ಲಾದ ಬದಲಾವಣೆಯೇ ಇದಕ್ಕೆ ಕಾರಣ. ಇಂತಹ ಸ್ಫೋಟದ ಸದ್ದು ಮರುದಿನ ಪಾಂಡವಪುರದಲ್ಲಿ, ನಂತರ ಮಾಗಡಿಯಲ್ಲಿ ಕೇಳಿಬಂದಿದೆ. ಕಳೆದ ವರ್ಷವೂ ಕೇಳಿಬಂದಿತ್ತು. ಒತ್ತಡ ಹೆಚ್ಚಿರುವ ಜಾಗದಲ್ಲಿ ಗಾಳಿ ವಿಸ್ತರಣೆಯಿಂದಾಗಿ ಈ ರೀತಿಯ ಸ್ಫೋಟ ಕೇಳಿಬರುತ್ತದೆ. ಇದಕ್ಕೆ ‘ಸ್ಕೈ ಕ್ವೇಕ್’ ಎಂದು ಕರೆಯುತ್ತಾರೆ.