ನಾನು ಇತ್ತೀಚೆಗೆ ದೆಹಲಿಗೆ ಭೇಟಿ ನೀಡಿದ್ದಾಗ, ನಾನು ಮತ್ತು ನನ್ನ ಸ್ನೇಹಿತರು ಅಲ್ಲಿನ ಕರ್ನಾಟಕ ಭವನದ ಅಧಿಕಾರಿಗಳ ಕಾರ್ಯವೈಖರಿಯನ್ನು ಗಮನಿಸಿದೆವು. ಅಲ್ಲೀಗ ನಾಲ್ವರು ಐಎಎಸ್ ಅಧಿಕಾರಿಗಳು, ನಾಲ್ವರು ಕೆಎಎಸ್ ಅಧಿಕಾರಿಗಳು, ಸುಮಾರು 10 ಮಂದಿ ವ್ಯವಸ್ಥಾಪಕರು ಹಾಗೂ ಇತರ ಕೆಲವು ಅಧಿಕಾರಿಗಳು ಇದ್ದಾರೆ.ಕೋವಿಡ್– 19 ಕಾರಣದಿಂದ ಕರ್ನಾಟಕ ಭವನದಲ್ಲಿ ಈಗ ಯಾವುದೇ ಅತಿಥಿಗಳಿಲ್ಲ ಮತ್ತು ಮುಂದಿನ ಆರು ತಿಂಗಳ ಕಾಲ ಅತಿಥಿಗಳು ಭೇಟಿ ನೀಡುವ ಸಾಧ್ಯತೆಯೂ ಕಡಿಮೆ.