<p>‘ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಪಕ್ಷದ ನಿಷ್ಠಾವಂತ ನಾಯಕರು, ಕಾರ್ಯಕರ್ತರ ಹಿತ ಕಾಯುವಲ್ಲಿ ಎಡವಿದ್ದೇವೆ. ಇದರಿಂದ ಪಕ್ಷಕ್ಕೆ ದೊಡ್ಡಮಟ್ಟದ ಹಾನಿಯಾಗಿದೆ’ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷಎಚ್.ಡಿ. ದೇವೇಗೌಡ ಹೇಳಿರುವುದು ವರದಿಯಾಗಿದೆ (ಪ್ರ.ವಾ., ಜುಲೈ 17).</p>.<p>ಕಾರ್ಯಕರ್ತರ ಹಿತ ಕಾಯದೆ ಇದ್ದುದಕ್ಕಲ್ಲ, ಪಕ್ಷದ ಅಧ್ಯಕ್ಷರ ಕುಟುಂಬದ ಸ್ವಹಿತ ಮಾತ್ರ ಕಾದುದಕ್ಕೇ ಈ ಪರಿಸ್ಥಿತಿ ಎಂಬುದು ಕಣ್ಣ ಮುಂದಿರುವ ಸತ್ಯ.</p>.<p>ವರ್ಷದ ಹಿಂದೆ ತಮ್ಮ ಪಕ್ಷದ ಪಾಲಿಗೆ ಬಂದ ಆರು ಲೋಕಸಭಾ ಸ್ಥಾನಗಳ ಪೈಕಿ ಮೂರರಲ್ಲಿ ಅವರ ಕುಟುಂಬದವರೇ ಸ್ಪರ್ಧಿಸಿದ್ದು ಇದಕ್ಕೊಂದು ನಿದರ್ಶನ. ವರಿಷ್ಠರು ಇಳಿವಯಸ್ಸಿನಲ್ಲೂ ರಾಜ್ಯಸಭೆಗೆ ಸ್ಪರ್ಧಿಸಿ, ಅವಿರೋಧವಾಗಿ ಆಯ್ಕೆಯಾಗಿದ್ದು ಮತ್ತೊಂದು ಉದಾಹರಣೆ.</p>.<p><strong>ಇದನ್ನೂ ಓದಿ:</strong><a href="https://www.prajavani.net/stories/karnataka-news/hd-deve-gowda-write-latter-to-jds-party-workers-and-leaders-745475.html" target="_blank">ಸಮ್ಮಿಶ್ರ ಸರ್ಕಾರ ಇದ್ದಾಗ ಕಾರ್ಯಕರ್ತರ ಹಿತ ಕಾಯುವಲ್ಲಿ ಎಡವಿದ್ದೇವೆ: ದೇವೇಗೌಡ</a></p>.<p>ಜೆಡಿಎಸ್ ಅಂದರೆ ಅಪ್ಪ– ಮಕ್ಕಳ ಪಕ್ಷ ಎಂಬ ಭಾವನೆ ಜನಮಾನಸದಲ್ಲಿ ನಿಂತಿದೆಯೇ ವಿನಾ, ಕರುನಾಡ ಜನರ ಹಿತ ಕಾಯುವ ಪಕ್ಷ ಎಂದಲ್ಲ. ಈ ಭಾವನೆ ಹೋಗಲಾಡಿಸಲು ಪಕ್ಷದ ವರಿಷ್ಠರು ಮೊದಲು ಗಮನಹರಿಸಲಿ.<br />-<em><strong>ಪತ್ತಂಗಿ ಎಸ್. ಮುರಳಿ,ಬೆಂಗಳೂರು</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>‘ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಪಕ್ಷದ ನಿಷ್ಠಾವಂತ ನಾಯಕರು, ಕಾರ್ಯಕರ್ತರ ಹಿತ ಕಾಯುವಲ್ಲಿ ಎಡವಿದ್ದೇವೆ. ಇದರಿಂದ ಪಕ್ಷಕ್ಕೆ ದೊಡ್ಡಮಟ್ಟದ ಹಾನಿಯಾಗಿದೆ’ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷಎಚ್.ಡಿ. ದೇವೇಗೌಡ ಹೇಳಿರುವುದು ವರದಿಯಾಗಿದೆ (ಪ್ರ.ವಾ., ಜುಲೈ 17).</p>.<p>ಕಾರ್ಯಕರ್ತರ ಹಿತ ಕಾಯದೆ ಇದ್ದುದಕ್ಕಲ್ಲ, ಪಕ್ಷದ ಅಧ್ಯಕ್ಷರ ಕುಟುಂಬದ ಸ್ವಹಿತ ಮಾತ್ರ ಕಾದುದಕ್ಕೇ ಈ ಪರಿಸ್ಥಿತಿ ಎಂಬುದು ಕಣ್ಣ ಮುಂದಿರುವ ಸತ್ಯ.</p>.<p>ವರ್ಷದ ಹಿಂದೆ ತಮ್ಮ ಪಕ್ಷದ ಪಾಲಿಗೆ ಬಂದ ಆರು ಲೋಕಸಭಾ ಸ್ಥಾನಗಳ ಪೈಕಿ ಮೂರರಲ್ಲಿ ಅವರ ಕುಟುಂಬದವರೇ ಸ್ಪರ್ಧಿಸಿದ್ದು ಇದಕ್ಕೊಂದು ನಿದರ್ಶನ. ವರಿಷ್ಠರು ಇಳಿವಯಸ್ಸಿನಲ್ಲೂ ರಾಜ್ಯಸಭೆಗೆ ಸ್ಪರ್ಧಿಸಿ, ಅವಿರೋಧವಾಗಿ ಆಯ್ಕೆಯಾಗಿದ್ದು ಮತ್ತೊಂದು ಉದಾಹರಣೆ.</p>.<p><strong>ಇದನ್ನೂ ಓದಿ:</strong><a href="https://www.prajavani.net/stories/karnataka-news/hd-deve-gowda-write-latter-to-jds-party-workers-and-leaders-745475.html" target="_blank">ಸಮ್ಮಿಶ್ರ ಸರ್ಕಾರ ಇದ್ದಾಗ ಕಾರ್ಯಕರ್ತರ ಹಿತ ಕಾಯುವಲ್ಲಿ ಎಡವಿದ್ದೇವೆ: ದೇವೇಗೌಡ</a></p>.<p>ಜೆಡಿಎಸ್ ಅಂದರೆ ಅಪ್ಪ– ಮಕ್ಕಳ ಪಕ್ಷ ಎಂಬ ಭಾವನೆ ಜನಮಾನಸದಲ್ಲಿ ನಿಂತಿದೆಯೇ ವಿನಾ, ಕರುನಾಡ ಜನರ ಹಿತ ಕಾಯುವ ಪಕ್ಷ ಎಂದಲ್ಲ. ಈ ಭಾವನೆ ಹೋಗಲಾಡಿಸಲು ಪಕ್ಷದ ವರಿಷ್ಠರು ಮೊದಲು ಗಮನಹರಿಸಲಿ.<br />-<em><strong>ಪತ್ತಂಗಿ ಎಸ್. ಮುರಳಿ,ಬೆಂಗಳೂರು</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>