ಸರ್ವರ ಏಳಿಗೆಗಾಗಿ ಜಾತಿ- ಮತಗಳನ್ನು ಮೀರಿ ಶ್ರಮಿಸಬೇಕಾದಂತಹ, ಸಮ ಸಮಾಜಕ್ಕೆ ದಾರಿ ತೋರಬೇಕಾದಂತಹ ಸ್ವಾಮೀಜಿಗಳು ಹಾಗೂ ಮಠಗಳ ಪೀಠಾಧ್ಯಕ್ಷರು ಇತ್ತೀಚಿನ ದಿನಗಳಲ್ಲಿ ಯಾವುದೋ ಒಂದು ಜಾತಿ-ಧರ್ಮದ ಪರವಾಗಿ ನಿಲ್ಲುತ್ತಿರುವುದು ವಿಷಾದನೀಯ. ತಾವು ಪ್ರತಿನಿಧಿಸುವ ಜಾತಿಯ ಜನಪ್ರತಿನಿಧಿಗಳಿಗೆ ಮಂತ್ರಿ ಪದವಿ ಕೊಡಿಸಲು, ಜಾತಿಗಾಗಿ ನಿಗಮ-ಮಂಡಳಿಗಳನ್ನು ರಚಿಸಲು ಹಾಗೂ ಯಾವುದೋ ನಿರ್ದಿಷ್ಟ ಮೀಸಲಾತಿ ಗುಂಪಿಗೆ ತಮ್ಮ ಜಾತಿಯನ್ನು ಸೇರಿಸುವ ಬೇಡಿಕೆ ಈಡೇರಿಕೆಗೆ ಮುಂದಾಳತ್ವ ವಹಿಸುತ್ತಿರುವುದು ವಿಪರ್ಯಾಸದ ಸಂಗತಿ.