ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಶಾಲೆಗಳಿಗೆ ದಕ್ಕಲಿ ಕ್ಷೇತ್ರಾಭಿವೃದ್ಧಿ ನಿಧಿ

Last Updated 1 ಡಿಸೆಂಬರ್ 2020, 19:00 IST
ಅಕ್ಷರ ಗಾತ್ರ

ಸರ್ಕಾರಿ ಶಾಲೆಗಳ ಅಭಿವೃದ್ಧಿಯನ್ನು ಕಡೆಗಣಿಸಿ, ಶಾಸಕರ ಕ್ಷೇತ್ರಾಭಿವೃದ್ಧಿ ನಿಧಿಯು ಕೇವಲ ‘ಮತಬೇಟೆ’ ನಿಧಿಯಾಗಿ ಬಳಕೆಯಾಗುತ್ತಿರುವ ಕುರಿತು ವರದಿಯಾಗಿದೆ (ಪ್ರ.ವಾ., ನ. 29). ಸರ್ಕಾರದ ಎಲ್ಲ ಯೋಜನೆಗಳನ್ನು ಕಾರ್ಯಗತಗೊಳಿಸಲು ಸಂಬಂಧಿಸಿದ ಇಲಾಖೆಗಳು ಮತ್ತು ನಿಗಮಗಳೇ ಇರುವುದರಿಂದ ಪ್ರತ್ಯೇಕವಾಗಿ ಶಾಸಕರಿಗೆ ಕ್ಷೇತ್ರಾಭಿವೃದ್ಧಿ ನಿಧಿಯನ್ನು ನೀಡಿ, ಅದನ್ನು ಅವರು ತಮ್ಮ ವಿವೇಚನೆಯಂತೆ ಬಳಸಿಕೊಳ್ಳಲು ಅವಕಾಶ ಕಲ್ಪಿಸುವ ಅಗತ್ಯವಿಲ್ಲ. ಹೀಗೆ ಮಾಡಿದಾಗ, ಸಹಜವಾಗಿಯೇ ಅವರು ನಿಧಿಯನ್ನು ಮತ ಸೆಳೆಯುವ ಸಾಧನವಾಗಿ ಬಳಸಿಕೊಂಡು, ಅವಶ್ಯಕತೆ ಇಲ್ಲದಿದ್ದರೂ ತಮಗೆ ಹೆಚ್ಚು ಮತಗಳನ್ನು ತಂದುಕೊಟ್ಟಿರುವ ಭಾಗಗಳಲ್ಲಿಯೋ ಅಥವಾ ತಮ್ಮ ಹಿಂಬಾಲಕರಿಗೆ ಸಹಾಯ ಮಾಡಲೋ ಬಳಸುವ ಸಂಭವವೇ ಹೆಚ್ಚು. ಇದರಿಂದ ಒಟ್ಟಾರೆ ಕ್ಷೇತ್ರದ ಅಭಿವೃದ್ಧಿಗೆ ಧಕ್ಕೆಯಾಗುತ್ತದೆ.

ಹೇಗಿದ್ದರೂ ಸರ್ಕಾರವೇ ಅನೇಕ ಯೋಜನೆಗಳಡಿ ಶುದ್ಧ ಕುಡಿಯುವ ನೀರು, ರಸ್ತೆ ಮುಂತಾದ ಕಾಮಗಾರಿಗಳಿಗೆ ನೇರವಾಗಿ ಹಣ ಒದಗಿಸುತ್ತದೆ. ಆದರೂ ಶಾಸಕರ ಕ್ಷೇತ್ರಾಭಿವೃದ್ಧಿ ನಿಧಿಯ ಹಂಚಿಕೆ ಅನಿವಾರ್ಯವೆಂದಾದಲ್ಲಿ, ಶಾಸಕರು ಈ ನಿಧಿಯನ್ನು ಸರ್ಕಾರಿ ಶಾಲೆಗಳ ಮೂಲ ಸೌಕರ್ಯ ಅಭಿವೃದ್ಧಿಗೆ ಬಳಸುವುದು ವಿಹಿತ. ಗುಡಿ-ಗುಂಡಾರಗಳು ಮತ್ತು ಜಾತಿ-ಉಪ ಜಾತಿಯ ಭವನಗಳ ನಿರ್ಮಾಣ ಎಂದೂ ಈ ನಿಧಿಯ ಬಳಕೆಗೆ ಆದ್ಯತೆಯಾಗಬಾರದು.

ಪುಟ್ಟೇಗೌಡ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT