ಈ ಬಾರಿಯ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಅನುತ್ತೀರ್ಣರಾದವರು, ಕಡಿಮೆ ಅಂಕ ಪಡೆದವರಲ್ಲಿ ಕೆಲವರು ಜೀವವನ್ನೇ ಬಲಿ ಕೊಟ್ಟ ಸುದ್ದಿಗಳು ವರದಿಯಾಗಿವೆ. ಮಕ್ಕಳು ಪಡೆದ ಅಂಕಕ್ಕಿಂತ ಹೆಚ್ಚು ಹೇಳಿಕೊಳ್ಳುವ ಪಾಲಕರು, ಚೆನ್ನಾಗಿ ಬರೆದರೂ ಕಡಿಮೆ ಅಂಕ ಬಂದಿದೆ ಎನ್ನುವ ಕೆಲ ಪರೀಕ್ಷಾರ್ಥಿಗಳು, ಮಗಳೋ ಮಗನೋ ಅನುತ್ತೀರ್ಣರಾದ ಕಾರಣಕ್ಕೆ ಎಷ್ಟೋ ದಿನ ಮನೆಯ ಮೆಟ್ಟಿಲನ್ನೇ ಇಳಿಯದ ತಂದೆ–ತಾಯಿ... ಪ್ರತೀ ವರ್ಷ ಫಲಿತಾಂಶ ಪ್ರಕಟವಾದಾಗ ಇಂತಹ ಸಂಗತಿಗಳು ಕಂಡುಬರುತ್ತವೆ. ನಡೆದದ್ದು ಪಿಯು ಪರೀಕ್ಷೆಯೇ ಹೊರತು ಬದುಕಿನ ಪರೀಕ್ಷೆಯಲ್ಲ!