ಗುರುವಿಲ್ಲದ್ದು ಮಠವಲ್ಲ, ಹಿರಿಯರಿಲ್ಲದ್ದು ಮನೆ ಅಲ್ಲ ಎಂಬ ಮಾತಿದೆ. ನಮ್ಮ ದೇಶದ ಸಂಸ್ಕೃತಿ ಬರೀ ಪುಸ್ತಕದಲ್ಲಿ ಇರುವುದಲ್ಲ, ಅದನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ನಮ್ಮನ್ನು ಸಾಕಿ ಸಲಹಿದ ಹಿರಿಯರಿಗೆ ಕೊನೆಗಾಲದಲ್ಲಿ ನೆಮ್ಮದಿಯ ಜೀವನ, ಊಟ, ಬಟ್ಟೆ ಕೊಡಲಾರದ ಸ್ಥಿತಿಗೆ ಬರುವುದು ವಿಷಾದನೀಯ ಸಂಗತಿ. ಮುಂದೆ ನಮ್ಮ ಗತಿಯೂ ಇದೇ ರೀತಿ ಆಗುತ್ತದೆ ಎನ್ನುವ ಪರಿಜ್ಞಾನ ಬೇಡವೇ? ಇಂತಹ ಸ್ಥಿತಿಯ ಬಗ್ಗೆ ಎಲ್ಲರೂ ಆತ್ಮವಿಮರ್ಶೆ ಮಾಡಿಕೊಳ್ಳಬೇಕಾಗಿದೆ.