<p>ದೆಹಲಿ ಸರ್ಕಾರ ತನ್ನ 150 ಸರ್ಕಾರಿ ಶಾಲಾ ಕಟ್ಟಡಗಳ ಮೇಲ್ಚಾವಣಿಗಳಲ್ಲಿ ಸೌರ ವಿದ್ಯುತ್ ವ್ಯವಸ್ಥೆ ಅಳವಡಿಸಿಕೊಂಡಿದೆ. ಈ ಕಾರ್ಯಕ್ಕೆ ಬೇಕಾಗುವ ಹಣವನ್ನು ಕೇಂದ್ರ ಸರ್ಕಾರದ ಯೋಜನೆಯಡಿಯಿಂದ ಪಡೆಯಲಾಗಿದೆ. ಇದರಿಂದ ಸುಮಾರು 21 ಮೆಗಾವಾಟ್ ಸೌರವಿದ್ಯುತ್ ಅನ್ನು ಉತ್ಪಾದನೆ ಮಾಡಲಾಗಿದೆ. ಇದರ ಪರಿಣಾಮವಾಗಿ, ವಾರ್ಷಿಕವಾಗಿ ಕೋಟ್ಯಂತರ ರೂಪಾಯಿ ಉಳಿತಾಯವಾದುದಷ್ಟೇ ಅಲ್ಲ ಕೋಟ್ಯಂತರ ರೂಪಾಯಿ ಮೌಲ್ಯದ ಸೌರವಿದ್ಯುತ್ ಅನ್ನು ಮಾರಾಟ ಸಹ ಮಾಡಲಾಗಿದೆ. ಈ ಎಲ್ಲಾ ಶಾಲೆಗಳಲ್ಲಿ ರಿನಿವಲ್ ಎನರ್ಜಿ ಸರ್ವಿಸ್ ಕಂಪನಿಯ (ರೆಸ್ಕೊ) ಮಾದರಿಯಲ್ಲಿ ಶಾಲೆಗಳ ಮೇಲ್ಚಾವಣಿಯಲ್ಲಿ ಸೌರವಿದ್ಯುತ್ ವ್ಯವಸ್ಥೆ ಅಳವಡಿಸಲಾಗಿದೆ. ಸೌರವಿದ್ಯುತ್ ಬಳಕೆಯಿಂದ ಸಾಮಾನ್ಯ ವಿದ್ಯುತ್ ದರಕ್ಕಿಂತ ಶೇ 65ರಷ್ಟು ಕಡಿಮೆ ಪ್ರಮಾಣದ ಮಾಸಿಕ ವಿದ್ಯುತ್ ಶುಲ್ಕ ಬರುತ್ತದೆ.</p>.<p>ಕರ್ನಾಟಕದಲ್ಲಿ ಸಾವಿರಾರು ಸರ್ಕಾರಿ ಹಾಗೂ ಅನುದಾನಿತ ಶಾಲಾ ಕಾಲೇಜುಗಳಿವೆ. ಇವೆಲ್ಲವುಗಳಿಂದ ಒಟ್ಟಾರೆ ಕೋಟ್ಯಂತರ ರೂಪಾಯಿ ವಿದ್ಯುತ್ ಶುಲ್ಕ ಬರುತ್ತದೆ. ಈ ಶಾಲೆಗಳಲ್ಲೂ ಸೌರವಿದ್ಯುತ್ ವ್ಯವಸ್ಥೆ ಅಳವಡಿಸಿದರೆ ಇಷ್ಟೆಲ್ಲಾ ಹಣ ಉಳಿಸಬಹುದಲ್ಲದೆ ಪರಿಸರ ಮಾಲಿನ್ಯವನ್ನೂ ತಗ್ಗಿಸಬಹುದು. ಈ ದಿಸೆಯಲ್ಲಿ ರಾಜ್ಯ ಸರ್ಕಾರ ಗಂಭೀರವಾಗಿ ಚಿಂತನೆ ನಡೆಸಬೇಕಾಗಿದೆ.</p>.<p><em><strong>–ವಿಜಯಕುಮಾರ್ ಎಚ್.ಕೆ., ರಾಯಚೂರು</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ದೆಹಲಿ ಸರ್ಕಾರ ತನ್ನ 150 ಸರ್ಕಾರಿ ಶಾಲಾ ಕಟ್ಟಡಗಳ ಮೇಲ್ಚಾವಣಿಗಳಲ್ಲಿ ಸೌರ ವಿದ್ಯುತ್ ವ್ಯವಸ್ಥೆ ಅಳವಡಿಸಿಕೊಂಡಿದೆ. ಈ ಕಾರ್ಯಕ್ಕೆ ಬೇಕಾಗುವ ಹಣವನ್ನು ಕೇಂದ್ರ ಸರ್ಕಾರದ ಯೋಜನೆಯಡಿಯಿಂದ ಪಡೆಯಲಾಗಿದೆ. ಇದರಿಂದ ಸುಮಾರು 21 ಮೆಗಾವಾಟ್ ಸೌರವಿದ್ಯುತ್ ಅನ್ನು ಉತ್ಪಾದನೆ ಮಾಡಲಾಗಿದೆ. ಇದರ ಪರಿಣಾಮವಾಗಿ, ವಾರ್ಷಿಕವಾಗಿ ಕೋಟ್ಯಂತರ ರೂಪಾಯಿ ಉಳಿತಾಯವಾದುದಷ್ಟೇ ಅಲ್ಲ ಕೋಟ್ಯಂತರ ರೂಪಾಯಿ ಮೌಲ್ಯದ ಸೌರವಿದ್ಯುತ್ ಅನ್ನು ಮಾರಾಟ ಸಹ ಮಾಡಲಾಗಿದೆ. ಈ ಎಲ್ಲಾ ಶಾಲೆಗಳಲ್ಲಿ ರಿನಿವಲ್ ಎನರ್ಜಿ ಸರ್ವಿಸ್ ಕಂಪನಿಯ (ರೆಸ್ಕೊ) ಮಾದರಿಯಲ್ಲಿ ಶಾಲೆಗಳ ಮೇಲ್ಚಾವಣಿಯಲ್ಲಿ ಸೌರವಿದ್ಯುತ್ ವ್ಯವಸ್ಥೆ ಅಳವಡಿಸಲಾಗಿದೆ. ಸೌರವಿದ್ಯುತ್ ಬಳಕೆಯಿಂದ ಸಾಮಾನ್ಯ ವಿದ್ಯುತ್ ದರಕ್ಕಿಂತ ಶೇ 65ರಷ್ಟು ಕಡಿಮೆ ಪ್ರಮಾಣದ ಮಾಸಿಕ ವಿದ್ಯುತ್ ಶುಲ್ಕ ಬರುತ್ತದೆ.</p>.<p>ಕರ್ನಾಟಕದಲ್ಲಿ ಸಾವಿರಾರು ಸರ್ಕಾರಿ ಹಾಗೂ ಅನುದಾನಿತ ಶಾಲಾ ಕಾಲೇಜುಗಳಿವೆ. ಇವೆಲ್ಲವುಗಳಿಂದ ಒಟ್ಟಾರೆ ಕೋಟ್ಯಂತರ ರೂಪಾಯಿ ವಿದ್ಯುತ್ ಶುಲ್ಕ ಬರುತ್ತದೆ. ಈ ಶಾಲೆಗಳಲ್ಲೂ ಸೌರವಿದ್ಯುತ್ ವ್ಯವಸ್ಥೆ ಅಳವಡಿಸಿದರೆ ಇಷ್ಟೆಲ್ಲಾ ಹಣ ಉಳಿಸಬಹುದಲ್ಲದೆ ಪರಿಸರ ಮಾಲಿನ್ಯವನ್ನೂ ತಗ್ಗಿಸಬಹುದು. ಈ ದಿಸೆಯಲ್ಲಿ ರಾಜ್ಯ ಸರ್ಕಾರ ಗಂಭೀರವಾಗಿ ಚಿಂತನೆ ನಡೆಸಬೇಕಾಗಿದೆ.</p>.<p><em><strong>–ವಿಜಯಕುಮಾರ್ ಎಚ್.ಕೆ., ರಾಯಚೂರು</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>