ವಿಧಾನಸೌಧದ ಮುಂಭಾಗದಲ್ಲಿ ಬಸವಣ್ಣ ಮತ್ತು ಕೆಂಪೇಗೌಡ ಅವರ ಪುತ್ಥಳಿಗಳ ಸ್ಥಾಪನೆಗೆ ಶಿಲಾನ್ಯಾಸ ಹಾಗೂ ಭೂಮಿಪೂಜೆ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಸರ್ಕಾರದ ಜಾಹೀರಾತು ಪ್ರಕಟವಾಗಿದ್ದು (ಪ್ರ.ವಾ., ಜ. 13), ಅದರಲ್ಲಿ ಬಸವಣ್ಣನವರ ಆಶೀರ್ವಾದದ ಭಂಗಿಯ ಚಿತ್ರ ಇದೆ. ಬಸವಣ್ಣನವರು ‘ಎನಗಿಂತ ಕಿರಿಯರಿಲ್ಲ ಶಿವಭಕ್ತರಿ ಗಿಂತ ಹಿರಿಯರಿಲ್ಲ’ ಎಂದು ಸಾರಿ ‘ಬಾಗಿದ ತಲೆ ಮುಗಿದ ಕೈಯಾಗಿಸು’ ಎಂದು ಕೂಡಲಸಂಗಮನಲ್ಲಿ ಬೇಡಿಕೊಂಡು ‘ವಿಶ್ವಗುರು’ವೆನಿಸಿದ್ದಾರೆ! ಅಂಥ ಸದ್ವಿನಯದ ಬಸವಣ್ಣನವರು ಯಾರಿಗೆ ಆಶೀರ್ವಾದ ಮಾಡಲು ಸಾಧ್ಯ?