ನರೇಗಾ ಯೋಜನೆ: ದುರುಪಯೋಗ ನಿಲ್ಲಿಸಿ
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯು ಗ್ರಾಮೀಣ ಭಾಗದ ಕೂಲಿ ಕಾರ್ಮಿಕರಿಗೆ ಒಂದು ಉತ್ತಮ ಯೋಜನೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಈ ಯೋಜನೆಯ ದುರುಪಯೋಗದ ಪ್ರಮಾಣ ಹೆಚ್ಚಾಗುತ್ತಿದೆ.
ಯೋಜನೆಯ ಅನುದಾನವನ್ನು ನೇರವಾಗಿ ಗ್ರಾಮ ಪಂಚಾಯಿತಿಗಳಿಗೆ ಬಿಡುಗಡೆ ಮಾಡುತ್ತಿರುವುದು ಗ್ರಾಮ ಪಂಚಾಯಿತಿಯ ಕೆಲವು ಪ್ರತಿನಿಧಿಗಳಿಗೆ ವರದಾನದಂತಾಗಿದೆ. ಅವರು ಈ ಯೋಜನೆಯ ಕಾಮಗಾರಿಗಳನ್ನು ತಮಗೆ ಬೇಕಾದಂತೆ ನಿಯಂತ್ರಿಸಿ ತಮ್ಮಿಷ್ಟದ ಗುತ್ತಿಗೆದಾರರ ಅಥವಾ ಸಂಬಂಧಿಕರ ಮೂಲಕ ಇಲ್ಲವೇ ಬೇನಾಮಿ ಹೆಸರಿನಲ್ಲಿ ಗುತ್ತಿಗೆ ಮಾಡಿಸಿ, ಜಾಬ್ ಕಾರ್ಡ್ದಾರರ ಹೆಸರಿನಲ್ಲಿ ಯಂತ್ರೋಪಕರಣಗಳನ್ನು ಬಳಸಿ, ನಂತರ ಕಾರ್ಡ್ದಾರರ ಸಹಿ ಪಡೆದು, ಲೆಕ್ಕ ತೋರಿಸಿ ಲಾಭ ಪಡೆಯುತ್ತಿದ್ದಾರೆ. ಇದರ ಬಗ್ಗೆ ಸರ್ಕಾರ ಸೂಕ್ತ ಕ್ರಮ ಕೈಗೊಂಡು, ಯೋಜನೆಯ ಸವಲತ್ತು ಫಲಾನುಭವಿಗಳಿಗೆ ಮಾತ್ರ ದೊರಕುವಂತೆ ಮಾಡಬೇಕು.
–ದಿಲೀಪ್ ಕುಮಾರ್ ಕೆ., ಬರಗೇನಹಳ್ಳಿ
ಪ್ರಜಾವಾಣಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.