ಶಿವಮೊಗ್ಗದ ಅಂತಿಮ ಎಂಬಿಬಿಎಸ್ ವಿದ್ಯಾರ್ಥಿನಿ ಲಲಿತಾ ಅವರು ಆತ್ಮಹತ್ಯೆ ಮಾಡಿಕೊಳ್ಳುವ (ಪ್ರ.ವಾ., ಡಿ. 24) ಮುನ್ನ, ತಮ್ಮನ್ನು ಸಾಕಿ ಸಲಹಲು ಪೋಷಕರು ವಹಿಸಿದ್ದ ಶ್ರಮದ ಬಗ್ಗೆ ಯೋಚಿಸಬೇಕಿತ್ತು. ವಿದ್ಯಾರ್ಥಿಗಳು ಇಂತಹ ಕೃತ್ಯಕ್ಕೆ ಯಾಕೆ ಮುಂದಾಗುತ್ತಾರೆ? ಎಲ್ಲ ಹಾಸ್ಟೆಲ್ಗಳ ವಿದ್ಯಾರ್ಥಿಗಳಿಗೆ ಆಗಾಗ ಆಪ್ತ ಸಮಾಲೋಚನೆ ನಡೆಸುವ ವ್ಯವಸ್ಥೆಯನ್ನು ಜಾರಿಗೆ ತರಬೇಕು.