ಈ ನಡೆಯು ಆಡಳಿತ ವರ್ಗಕ್ಕೆ ಶೋಭೆ ತರುವಂತಹದ್ದಲ್ಲ. ಮುಂದಿನ ದಿನಗಳಲ್ಲಿ ಆಡಳಿತ ನಡೆಸುವ ಪಕ್ಷದ ಕಾರ್ಯಕರ್ತರಿಗೆ ಇಲಾಖೆಯ ಮುಖ್ಯಸ್ಥರ ಹುದ್ದೆಯನ್ನು ಗುತ್ತಿಗೆ ಮೂಲಕ ನೀಡಿದರೂ ಆಶ್ಚರ್ಯವಿಲ್ಲ. ಶಾಸಕರನ್ನು ಖರೀದಿಸಿ ‘ಆಪರೇಷನ್ ಕಮಲ’ದಿಂದ ಸರ್ಕಾರ ರಚಿಸಿದ್ದು ಹಳೆ ಸುದ್ದಿಯಾಗಿತ್ತು, ಈಗ ಸ್ವಹಿತಾಸಕ್ತಿಗಾಗಿ ‘ಆಪರೇಷನ್ ಅಧಿಕಾರಿ’ ಕೆಲಸ ನಡೆಯುತ್ತಿದೆ. ಭ್ರಷ್ಟಾಚಾರಕ್ಕೆ ಇನ್ನೂ ಎಷ್ಟು ಮುಖಗಳಿವೆಯೋ ಆ ದೇವರಿಗೇ ಗೊತ್ತು!
-ತಾ.ಸಿ.ತಿಮ್ಮಯ್ಯ, ಬೆಂಗಳೂರು