ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ‘ಆಪರೇಷನ್ ಅಧಿಕಾರಿ’!

Last Updated 1 ಸೆಪ್ಟೆಂಬರ್ 2022, 19:30 IST
ಅಕ್ಷರ ಗಾತ್ರ

ಹೂವಿನಹಡಗಲಿ ತಾಲ್ಲೂಕು ಪಂಚಾಯಿತಿಗೆ ಕಾರ್ಯನಿರ್ವಾಹಕ ಅಧಿಕಾರಿಯನ್ನು ಒಂದು ವರ್ಷದ ಅವಧಿಗೆ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿರುವ ಸುದ್ದಿ ಓದಿ ಆಘಾತವಾಯಿತು.

ಈ ನಡೆಯು ಆಡಳಿತ ವರ್ಗಕ್ಕೆ ಶೋಭೆ ತರುವಂತಹದ್ದಲ್ಲ. ಮುಂದಿನ ದಿನಗಳಲ್ಲಿ ಆಡಳಿತ ನಡೆಸುವ ಪಕ್ಷದ ಕಾರ್ಯಕರ್ತರಿಗೆ ಇಲಾಖೆಯ ಮುಖ್ಯಸ್ಥರ ಹುದ್ದೆಯನ್ನು ಗುತ್ತಿಗೆ ಮೂಲಕ ನೀಡಿದರೂ ಆಶ್ಚರ್ಯವಿಲ್ಲ. ಶಾಸಕರನ್ನು ಖರೀದಿಸಿ ‘ಆಪರೇಷನ್ ಕಮಲ’ದಿಂದ ಸರ್ಕಾರ ರಚಿಸಿದ್ದು ಹಳೆ ಸುದ್ದಿಯಾಗಿತ್ತು, ಈಗ ಸ್ವಹಿತಾಸಕ್ತಿಗಾಗಿ ‘ಆಪರೇಷನ್ ಅಧಿಕಾರಿ’ ಕೆಲಸ ನಡೆಯುತ್ತಿದೆ. ಭ್ರಷ್ಟಾಚಾರಕ್ಕೆ ಇನ್ನೂ ಎಷ್ಟು ಮುಖಗಳಿವೆಯೋ ಆ ದೇವರಿಗೇ ಗೊತ್ತು!

-ತಾ.ಸಿ.ತಿಮ್ಮಯ್ಯ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT