ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವಮಾನಕರ: ಇದನ್ನು ಸರಿಪಡಿಸಿ

Last Updated 3 ನವೆಂಬರ್ 2022, 19:45 IST
ಅಕ್ಷರ ಗಾತ್ರ

ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿರುವ ಬೆಂಗಳೂರಿನ ದೊಡ್ಡ ಗಣಪತಿ ಸಮೂಹ ದೇವಸ್ಥಾನಗಳ ಆವರಣದಲ್ಲಿ ಚಪ್ಪಲಿ ಕಾಯ್ದುಕೊಳ್ಳುವ ಕೆಲಸವನ್ನು ದಲಿತರಿಗೆ ಮೀಸಲಿಟ್ಟ ಸುದ್ದಿ (ಪ್ರ.ವಾ., ನ. 2) ತಿಳಿದು ಬೇಸರವಾಯಿತು. ಬಹಿರಂಗ ಹರಾಜು ಪ್ರಕಟಣೆಯಲ್ಲಿ ಈ ರೀತಿ ಒಂದು ವರ್ಗಕ್ಕೆ ಮಾತ್ರ ಇಂತಹ ಕೆಲಸ ಎಂದು ನಿಗದಿಪಡಿಸಿದ್ದು ದುರದೃಷ್ಟಕರ. ಪರಿಶಿಷ್ಟರಿಗೆ ಮೀಸಲಾತಿ ಹೆಚ್ಚಿಸಿ ಸರ್ಕಾರ ಆದೇಶ ಹೊರಡಿಸಿದ ಬೆನ್ನಲ್ಲೇ ಸಾಮಾಜಿಕವಾಗಿ ಪರಿಶಿಷ್ಟರನ್ನು ಅವಮಾನಿಸುವಂಥ ಈ ರೀತಿಯ ಮೀಸಲು ಪ್ರಕ್ರಿಯೆಯ ವಿಷಯ ಬಹಿರಂಗ ಆಗಿದೆ! ಇದು, ಖಂಡನೀಯ. ಇಂತಹ ವ್ಯವಸ್ಥೆಯನ್ನು ಸರಿಪಡಿಸಲು ಮುಜರಾಯಿ ಇಲಾಖೆ ತಕ್ಷಣ ಕ್ರಮ ಕೈಗೊಳ್ಳಬೇಕು.

-ಹುಸೇನಬಾಷಾ ತಳೇವಾಡ, ಹುಬ್ಬಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT