ಬೇಡಿಕೆಗಳನ್ನು ಮುಂದಿಟ್ಟು ಸಂವಿಧಾನಬದ್ಧವಾಗಿ ಪ್ರತಿಭಟಿಸುವ ಅವಕಾಶ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದ್ದೇ ಇದೆ. ಅಂತೆಯೇ ಪ್ರತಿಭಟನೆಗೆ ಬಹಳಷ್ಟು ಮಾರ್ಗಗಳಿವೆ. ಲೋಕಪಾಲ ಜಾರಿಗಾಗಿ ಅಣ್ಣಾ ಹಜಾರೆಯವರು ಗಾಂಧೀಜಿ ಕಲಿಸಿದ ಹಾದಿಯಲ್ಲಿ ಇತ್ತೀಚಿನ ವರ್ಷಗಳಲ್ಲಿ ನಡೆಸಿದ ಹೋರಾಟ, ಅದಕ್ಕೆ ದೊರೆತ ಜನಬೆಂಬಲ ಅಪ್ರತಿಮವಾದದ್ದು. ತೊಂದರೆ ಯಾರಿಂದ ಆಗಿದೆಯೋ ಅವರಿಗೆ ಘೇರಾವ್ ಹಾಕಬಹುದು, ಆಮರಣಾಂತ ಉಪವಾಸ ಸತ್ಯಾಗ್ರಹ ಕೂರಬಹುದು, ಕಪ್ಪುಪಟ್ಟಿ ಧರಿಸುವುದು, ಮೌನಾಚರಣೆ ಸೇರಿದಂತೆ ಹಲವು ವಿಧಗಳಲ್ಲಿ
ಪ್ರತಿಭಟನೆಗಳನ್ನು ನಡೆಸಬಹುದು.