ಯುಪಿಎಸ್ಸಿ ಪರೀಕ್ಷೆ ಕಬ್ಬಿಣದ ಕಡಲೆ, ಅದು ಸಾಮಾನ್ಯರಿಗಲ್ಲ ಎಂಬ ಭಾವನೆ ಸಮಾಜದಲ್ಲಿ ಇದೆ. ಆದರೆ ವ್ಯವಸ್ಥಿತ ಓದು, ಶ್ರದ್ಧೆ, ಸೂಕ್ತ ತರಬೇತಿಯಿಂದ ಈ ಕನಸನ್ನು ನನಸಾಗಿಸಿಕೊಳ್ಳುವುದು ಕಷ್ಟವೇನಲ್ಲ. ಮುಂದಿನ ದಿನಗಳಲ್ಲಿ ಕರ್ನಾಟಕದಿಂದ ಇಂತಹ ಮತ್ತಷ್ಟು ಯುವಪ್ರತಿಭೆಗಳು ಯುಪಿಎಸ್ಸಿ ಪರೀಕ್ಷೆಯಲ್ಲಿ ಅರಳಲಿ.