‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜಯಂತಿಯಂದು ಸರ್ಕಾರಿ ರಜೆ ಘೋಷಿಸುವ ಅಗತ್ಯವಿಲ್ಲ’ ಎಂದು ಕಾಗಿನೆಲೆ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ಹೇಳಿರುವುದು ವರದಿಯಾಗಿದೆ (ಪ್ರ.ವಾ., ಆ. 20). ಇದು ಸರಿಯಾದ ನಿಲುವು. ರಾಯಣ್ಣ ಜಯಂತಿ ಮಾತ್ರವಲ್ಲ, ಎಲ್ಲ ಮಹನೀಯರ ಜಯಂತಿಗಳಿಗೂ ಈ ನೀತಿ ಅನ್ವಯವಾಗಬೇಕು. ರಜೆ ನೀಡುವ ಬದಲು ನಮ್ಮ ಮಹನೀಯರ ತತ್ತ್ವ, ಆದರ್ಶಗಳನ್ನು ಜನಸಾಮಾನ್ಯರಿಗೆ ತಲುಪಿಸಿ, ಅವುಗಳನ್ನು ಅಳವಡಿಸಿಕೊಳ್ಳುವಂತೆ ಪ್ರೇರೇಪಿಸುವ ವ್ಯವಸ್ಥೆ ಮಾಡಬೇಕು. ಆ ಮೂಲಕ ಮಹಾತ್ಮರನ್ನು ಚಿರಸ್ಥಾಯಿಯಾಗಿಸುವುದು ಸರ್ಕಾರದ ಆದ್ಯತೆಯಾಗಬೇಕು. ಸರ್ಕಾರ ಈ ನಿಟ್ಟಿನಲ್ಲಿ ಚಿಂತಿಸಲಿ.