ದ್ವಿಚಕ್ರ ವಾಹನ ಸವಾರರನ್ನು ಬೇಟೆಯಾಡುವುದೊಂದೇ ಪೊಲೀಸರ ಕರ್ತವ್ಯವೇ? ರಸ್ತೆಗಳು ಸುಸ್ಥಿತಿಯಲ್ಲಿ ಇರುವಂತೆ ನೋಡಿಕೊಳ್ಳುವುದು ಸಂಬಂಧಿಸಿದ ನಗರಪಾಲಿಕೆಯಜವಾಬ್ದಾರಿ. ಈ ಜವಾಬ್ದಾರಿಯನ್ನು ನಿರ್ವಹಿಸಲು ವಿಫಲವಾದಪಾಲಿಕೆಗಳವಿರುದ್ಧದೂರು ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಬೇಕಾದ ಜವಾಬ್ದಾರಿ ಪೊಲೀಸರದ್ದು. ಈ ಕೂಡಲೇ ಪೊಲೀಸ್ ಅಧಿಕಾರಿಗಳು ಎಚ್ಚೆತ್ತು, ರಾಜ್ಯದ ಎಲ್ಲಾ ರಸ್ತೆಗಳಲ್ಲಿ ಇರುವ ಒಂದೊಂದೂ ಗುಂಡಿ, ಹಳ್ಳ-ಕೊಳ್ಳಗಳ ವಿಚಾರವಾಗಿ ಸಂಬಂಧಿಸಿದ ನಗರಪಾಲಿಕೆಯವಿರುದ್ಧ ‘ಕರ್ನಾಟಕಪೊಲೀಸ್ಕಾಯ್ದೆ’ಯ ಅನ್ವಯ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ಮುಲಾಜಿಲ್ಲದೇ ಕಾನೂನು ಕ್ರಮ ಜರುಗಿಸಲಿ.