ವಿಮಾನ ಪ್ರಯಾಣಿಕರಿಗೆ ವೈದ್ಯಕೀಯ ಪ್ರಮಾಣಪತ್ರ ಪರಿಶೀಲನೆ ಕಡ್ಡಾಯಗೊಳಿಸಬೇಕು ಎಂಬುದನ್ನು ಜಯಮ್ಮ ಗೋಪಾಲಕೃಷ್ಣ ಅವರು ಅರ್ಥಪೂರ್ಣವಾಗಿ ಪ್ರತಿಪಾದಿಸಿದ್ದಾರೆ (ವಾ.ವಾ., ಏ. 10). ನಿಜ, ಕೊರೊನಾದ ಮೊದಲ ಅಲೆಯ ಸಂದರ್ಭದಲ್ಲಿ ವಿದೇಶಗಳಿಂದ ಯಾವುದೇ ಎಗ್ಗಿಲ್ಲದೆ ವಿಮಾನಗಳ ಮೂಲಕ ಲಕ್ಷಾಂತರ ಮಂದಿ ದೇಶವನ್ನು ಪ್ರವೇಶಿಸಿದರು. ಆ ದಿನಗಳಲ್ಲಿ ಹೀಗೆ ಬಂದವರನ್ನು ವಿಮಾನ ನಿಲ್ದಾಣಗಳಲ್ಲಿ ಯಾವುದೇ ಪರೀಕ್ಷೆಗೂ ಒಳಪಡಿಸದೆ, ಕ್ವಾರಂಟೈನ್ಗೂ ಒಳಪಡಿಸದೆ ಸೀದಾಸಾದಾ ದೇಶದೊಳಕ್ಕೆ ಬಿಟ್ಟುಕೊಂಡಬೇಜವಾಬ್ದಾರಿತನದ ನಡೆಯಿಂದಾಗಿ ದೇಶದಾದ್ಯಂತ ಕೊರೊನಾ ಹರಡಿ ಜನರನ್ನು ಇನ್ನಿಲ್ಲದಂತೆ ಕಾಡುವಂತಾಯಿತು. ಕೊರೊನಾದ ಎರಡನೇ ಅಲೆ ಶುರುವಾಗಿರುವ ಈ ಸಂದರ್ಭದಲ್ಲಾದರೂ ಸರ್ಕಾರಗಳು ಎಚ್ಚರಿಕೆಯಿಂದ ವರ್ತಿಸಬೇಕು.