<p class="Briefhead"><strong>ಬೇಜವಾಬ್ದಾರಿತನದ ನಡೆ ಸಲ್ಲ</strong></p>.<p>ವಿಮಾನ ಪ್ರಯಾಣಿಕರಿಗೆ ವೈದ್ಯಕೀಯ ಪ್ರಮಾಣಪತ್ರ ಪರಿಶೀಲನೆ ಕಡ್ಡಾಯಗೊಳಿಸಬೇಕು ಎಂಬುದನ್ನು ಜಯಮ್ಮ ಗೋಪಾಲಕೃಷ್ಣ ಅವರು ಅರ್ಥಪೂರ್ಣವಾಗಿ ಪ್ರತಿಪಾದಿಸಿದ್ದಾರೆ (ವಾ.ವಾ., ಏ. 10). ನಿಜ, ಕೊರೊನಾದ ಮೊದಲ ಅಲೆಯ ಸಂದರ್ಭದಲ್ಲಿ ವಿದೇಶಗಳಿಂದ ಯಾವುದೇ ಎಗ್ಗಿಲ್ಲದೆ ವಿಮಾನಗಳ ಮೂಲಕ ಲಕ್ಷಾಂತರ ಮಂದಿ ದೇಶವನ್ನು ಪ್ರವೇಶಿಸಿದರು. ಆ ದಿನಗಳಲ್ಲಿ ಹೀಗೆ ಬಂದವರನ್ನು ವಿಮಾನ ನಿಲ್ದಾಣಗಳಲ್ಲಿ ಯಾವುದೇ ಪರೀಕ್ಷೆಗೂ ಒಳಪಡಿಸದೆ, ಕ್ವಾರಂಟೈನ್ಗೂ ಒಳಪಡಿಸದೆ ಸೀದಾಸಾದಾ ದೇಶದೊಳಕ್ಕೆ ಬಿಟ್ಟುಕೊಂಡಬೇಜವಾಬ್ದಾರಿತನದ ನಡೆಯಿಂದಾಗಿ ದೇಶದಾದ್ಯಂತ ಕೊರೊನಾ ಹರಡಿ ಜನರನ್ನು ಇನ್ನಿಲ್ಲದಂತೆ ಕಾಡುವಂತಾಯಿತು. ಕೊರೊನಾದ ಎರಡನೇ ಅಲೆ ಶುರುವಾಗಿರುವ ಈ ಸಂದರ್ಭದಲ್ಲಾದರೂ ಸರ್ಕಾರಗಳು ಎಚ್ಚರಿಕೆಯಿಂದ ವರ್ತಿಸಬೇಕು.</p>.<p><strong>- ರಾಜೇಂದ್ರ ಅಪುರಾ, <span class="Designate">ಅಗತಗೌಡನಹಳ್ಳಿ, ಗುಂಡ್ಲುಪೇಟೆ</span></strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="Briefhead"><strong>ಬೇಜವಾಬ್ದಾರಿತನದ ನಡೆ ಸಲ್ಲ</strong></p>.<p>ವಿಮಾನ ಪ್ರಯಾಣಿಕರಿಗೆ ವೈದ್ಯಕೀಯ ಪ್ರಮಾಣಪತ್ರ ಪರಿಶೀಲನೆ ಕಡ್ಡಾಯಗೊಳಿಸಬೇಕು ಎಂಬುದನ್ನು ಜಯಮ್ಮ ಗೋಪಾಲಕೃಷ್ಣ ಅವರು ಅರ್ಥಪೂರ್ಣವಾಗಿ ಪ್ರತಿಪಾದಿಸಿದ್ದಾರೆ (ವಾ.ವಾ., ಏ. 10). ನಿಜ, ಕೊರೊನಾದ ಮೊದಲ ಅಲೆಯ ಸಂದರ್ಭದಲ್ಲಿ ವಿದೇಶಗಳಿಂದ ಯಾವುದೇ ಎಗ್ಗಿಲ್ಲದೆ ವಿಮಾನಗಳ ಮೂಲಕ ಲಕ್ಷಾಂತರ ಮಂದಿ ದೇಶವನ್ನು ಪ್ರವೇಶಿಸಿದರು. ಆ ದಿನಗಳಲ್ಲಿ ಹೀಗೆ ಬಂದವರನ್ನು ವಿಮಾನ ನಿಲ್ದಾಣಗಳಲ್ಲಿ ಯಾವುದೇ ಪರೀಕ್ಷೆಗೂ ಒಳಪಡಿಸದೆ, ಕ್ವಾರಂಟೈನ್ಗೂ ಒಳಪಡಿಸದೆ ಸೀದಾಸಾದಾ ದೇಶದೊಳಕ್ಕೆ ಬಿಟ್ಟುಕೊಂಡಬೇಜವಾಬ್ದಾರಿತನದ ನಡೆಯಿಂದಾಗಿ ದೇಶದಾದ್ಯಂತ ಕೊರೊನಾ ಹರಡಿ ಜನರನ್ನು ಇನ್ನಿಲ್ಲದಂತೆ ಕಾಡುವಂತಾಯಿತು. ಕೊರೊನಾದ ಎರಡನೇ ಅಲೆ ಶುರುವಾಗಿರುವ ಈ ಸಂದರ್ಭದಲ್ಲಾದರೂ ಸರ್ಕಾರಗಳು ಎಚ್ಚರಿಕೆಯಿಂದ ವರ್ತಿಸಬೇಕು.</p>.<p><strong>- ರಾಜೇಂದ್ರ ಅಪುರಾ, <span class="Designate">ಅಗತಗೌಡನಹಳ್ಳಿ, ಗುಂಡ್ಲುಪೇಟೆ</span></strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>