ಪ್ರಕೃತಿಯು ತನ್ನ ರಕ್ಷಣೆಯನ್ನು ತಾನೇ ಮಾಡಿಕೊಳ್ಳುತ್ತದೆ ಎಂಬ ಮಾತಿದೆ. ಅದರಂತೆ ಪ್ರಕೃತಿಯು ಭೂಕಂಪ, ಪ್ರವಾಹ, ಸುನಾಮಿ ಯಂತಹ ನೈಸರ್ಗಿಕ ವಿಕೋಪಗಳನ್ನು ಉಂಟು ಮಾಡಿ, ಪರಿಸರ ಸಮತೋಲನ ಕಾಯ್ದುಕೊಳ್ಳಲು ಪ್ರಯತ್ನಿಸುತ್ತದೆ ಎಂದಾದರೆ, ಈಗ ಹರಡಿರುವ ಕೊರೊನಾ– 2 ಸೋಂಕು ಸಹ ಪ್ರಕೃತಿಯ ರಕ್ಷಣಾ ತಂತ್ರವೇ ಆಗಿರುತ್ತದೆ. ಹಾಗಿದ್ದರೆ, ಅದನ್ನು ತಡೆಗಟ್ಟಲು ಮಾನವ ಮಾಡುವ ಯಾವ ತಂತ್ರವೂ ಅಷ್ಟು ಸುಲಭವಾಗಿ ಫಲಿಸದು ಎಂದರ್ಥ. ಮಾನವ ಮತ್ತು ಪ್ರಕೃತಿಯ ನಡುವೆ ಹೋರಾಟ ನಡೆದರೆ, ಕೊನೆಗೆ ಗೆಲ್ಲುವುದು ಪ್ರಕೃತಿಯೇ. ಇದನ್ನು ಅರಿತು ನಾವು ಪರಿಸರ ಅಸಮತೋಲನ ಉಂಟಾಗದಂತೆ ನೋಡಿಕೊಳ್ಳಬೇಕು. ಇಲ್ಲದಿದ್ದರೆ ಗಂಭೀರ ಪರಿಣಾಮಗಳು ತಪ್ಪಿದ್ದಲ್ಲ.